ಮೂಡುಬಿದಿರೆ: ಕಳೆದ ಎರಡು ವಾರಗಳ ಹಿಂದೆ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಶಿರ್ತಾಡಿಯ ಯುವಕ ಚಿಕಿತ್ಸೆ ಫಲಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
![](http://dtvkannada.in/wp-content/uploads/2022/01/IMG-20220127-WA0056.jpg)
ಮೃತಪಟ್ಟ ವ್ಯಕ್ತಿ ಶಿರ್ತಾಡಿ ಕಜೆ ನಿವಾಸಿ ವಿಕೇಶ್ (22) ಎಂದು ತಿಳಿದು ಬಂದಿದೆ. ಎರಡು ವಾರಗಳ ಹಿಂದೆ ಪಡುಕೊಣಾಜೆ ಬಳಿ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ವಿಕೇಶ್ ಶಿರ್ತಾಡಿ ಹಾಗೂ ವಾಲ್ಪಾಡಿ ತಂಡಗಳ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರರಾಗಿದ್ದರು. ಶಿರ್ತಾಡಿಯ ಕಾಂಗ್ರೆಸ್ ಸಮಿತಿಯ ಸದಸ್ಯರು ಕೂಡ ಆಗಿದ್ದರೆಂದು ತಿಳಿದು ಬಂದಿದೆ.