ಕೋಟ್ಟಯಂ: ಕೇರಳ ಭಾಗದಲ್ಲಿ ಹೆಸರುವಾಸಿಯಾಗಿರುವ ಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಅವರಿಗೆ ವಿಷಕಾರಿ ನಾಗರಹಾವು ಕಚ್ಚಿದ್ದು, ಸುರೇಶ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಕಳಗದ ಮೂರು ದಿನಗಳ ಹಿಂದೆ ಈ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿದ್ದು ಸಾರ್ವಜನಿಕರು ಹಾವನ್ನು ಹಿಡಿಯಲು ವಾವಾ ಸುರೇಶ್ ಅವರನ್ನು ಕರೆಸಿಕೊಂಡಿದ್ದರು.
ಕರೆ ಸ್ವೀಕರಿಸಿದ ವಾವ ರವರು ಸ್ಥಳಕ್ಕೆ ಆಗಮಿಸಿದ್ದು ಇದು ಕೇರಳದ ಕೊಟ್ಟಾಯಂನ ಕುರಿಚಿ ಎಂಬಲ್ಲಾಗಿತ್ತು. ನಾಗರಹಾವನ್ನು ಹಿಡಿದು ಗೊಣಿ ಚೀಲಕ್ಕೆ ತುಂಬಿಸುವ ವೇಳೆ ಈ ದುರ್ಘಟನೆ ನಡೆದಿದ್ದು ನಾಗರ ಹಾವು ಅವರ ಬಲಗಾಲಿನ ತೊಡೆಗೆ ಕಚ್ಚಿದ್ದು ತಕ್ಷಣವೇ ವಾವ ಅವರು ಹಾವಿಂದ ಬಿಡಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ.

ಹಾವು ಕಚ್ಚಿದ ತಕ್ಷಣವೇ ಸುರೇಶ್ ಅವರನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಯಂನ ಖಾಸಗಿ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಈ ಹಿಂದೆಯೂ ಕೂಡ ವಾವಾ ಸುರೇಶ್ ಹಾವು ಕಡಿತಕ್ಕೊಳಗಾಗಿ ಎರಡು ಬಾರಿ ವೆಂಟಿಲೇಟರ್ನಲ್ಲಿದ್ದು, ಬದುಕುಳಿದಿದ್ದರು. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.