ಕೋಟ್ಟಯಂ: ಕೇರಳ ಭಾಗದಲ್ಲಿ ಹೆಸರುವಾಸಿಯಾಗಿರುವ ಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಅವರಿಗೆ ವಿಷಕಾರಿ ನಾಗರಹಾವು ಕಚ್ಚಿದ್ದು, ಸುರೇಶ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
![](http://dtvkannada.in/wp-content/uploads/2022/02/IMG-20220201-WA0004-1024x678.jpg)
ಕಳಗದ ಮೂರು ದಿನಗಳ ಹಿಂದೆ ಈ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿದ್ದು ಸಾರ್ವಜನಿಕರು ಹಾವನ್ನು ಹಿಡಿಯಲು ವಾವಾ ಸುರೇಶ್ ಅವರನ್ನು ಕರೆಸಿಕೊಂಡಿದ್ದರು.
ಕರೆ ಸ್ವೀಕರಿಸಿದ ವಾವ ರವರು ಸ್ಥಳಕ್ಕೆ ಆಗಮಿಸಿದ್ದು ಇದು ಕೇರಳದ ಕೊಟ್ಟಾಯಂನ ಕುರಿಚಿ ಎಂಬಲ್ಲಾಗಿತ್ತು. ನಾಗರಹಾವನ್ನು ಹಿಡಿದು ಗೊಣಿ ಚೀಲಕ್ಕೆ ತುಂಬಿಸುವ ವೇಳೆ ಈ ದುರ್ಘಟನೆ ನಡೆದಿದ್ದು ನಾಗರ ಹಾವು ಅವರ ಬಲಗಾಲಿನ ತೊಡೆಗೆ ಕಚ್ಚಿದ್ದು ತಕ್ಷಣವೇ ವಾವ ಅವರು ಹಾವಿಂದ ಬಿಡಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ.
![](http://dtvkannada.in/wp-content/uploads/2022/02/IMG-20220201-WA0003.jpg)
ಹಾವು ಕಚ್ಚಿದ ತಕ್ಷಣವೇ ಸುರೇಶ್ ಅವರನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಯಂನ ಖಾಸಗಿ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಈ ಹಿಂದೆಯೂ ಕೂಡ ವಾವಾ ಸುರೇಶ್ ಹಾವು ಕಡಿತಕ್ಕೊಳಗಾಗಿ ಎರಡು ಬಾರಿ ವೆಂಟಿಲೇಟರ್ನಲ್ಲಿದ್ದು, ಬದುಕುಳಿದಿದ್ದರು. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.