dtvkannada

ಕಡಬ: ಕಡಬ ತಾಲೂಕಿನ ಚರಿತ್ರೆ ಪ್ರಸಿದ್ದ ಕುಂತೂರು ಬೇಲ್ಪಾಡಿಯಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿರವರ ಹೆಸರಿನಲ್ಲಿ ಬೇಲ್ಪಾಡಿ ಮಖಾಂ ಉರೂಸ್ ಹಾಗೂ ಮಜ್ಲಿಸುನ್ನೂರು ಮಹಾ ಸಂಗಮವು ಇದೇ ಬರುವ ಫೆಬ್ರವರಿ 15 ರಿಂದ 19ರವರೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೇರಳ ಹಾಗೂ ಕರ್ನಾಟಕದ ಖ್ಯಾತ ವಾಗ್ಮಿಗಳು ಭಾಷಣವನ್ನು ಮಾಡಲಿಕ್ಕಿದ್ದಾರೆ.

ದಿನಾಂಕ 17-02-2022 ರಂದು ಸಯ್ಯಿದ್ ಅಬ್ದುರ್ರಶೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೇತೃತ್ವದಲ್ಲಿ ಮಜ್ಲಿಸುನ್ನೂರ್ ವಾರ್ಷಿಕ ಆದ್ಯಾತ್ಮಿಕ ಮಹಾ ಸಂಗಮ ನಡೆಯಲಿದ್ದು, 18/02/2022 ರಂದು ಖಲೀಲ್ ಹುದವಿ ರವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಫೆಬ್ರವರಿ 19ರ ಸಮಾರೋಪ‌ ದಿನದಂದು ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೊಯ ತಂಙಳ್ ಸೇರಿದಂತೆ ಹಲವಾರು ಸಾದಾತುಗಳು, ಉಲಮಾಗಳು ಧಿವ್ಯ ಸಾನಿಧ್ಯವನ್ನು ಬಯಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!