ಮಂಗಳೂರು: ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಇದರ ಸಂಸ್ಥಾಪನ ದಿನದ ಅಂಗವಾಗಿ ಬದ್ರಿಯಾ ನಗರ ಯುನಿಟ್ ವತಿಯಿಂದ ಯೂನಿಟ್ ಅಧ್ಯಕ್ಷರಾದ ಅಝರ್ ಬದ್ರಿಯಾ ನಗರ ಧ್ವಜಾರೋಹಣ ಮಾಡುವ ಮೂಲಕ ಆಚರಿಸಿದರು.
ಕಾರ್ಯಕ್ರಮದಲ್ಲಿ ವಾಮಂಜೂರು ವಲಯ ಕಾರ್ಯದರ್ಶಿ ಶಫೀಕ್ ಬದ್ರಿಯಾ ನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಮಲ್ಲೂರು ಗ್ರಾಮ ಸಮಿತಿ ಕಾರ್ಯದರ್ಶಿ ಮಜೀದ್ ಬದ್ರಿಯಾ ದೆಮ್ಮಲೆ ಹಿತವಚನ ನೀಡಿದರು.
ಯಾಸಿನ್ ಬದ್ರಿಯಾ ನಗರ ನಿರೂಪಿಸಿ, ಸ್ವಾಗತಿಸಿದರು. ಅಝರ್ ಬದ್ರಿಯಾ ನಗರ ವಂದಿಸಿದರು. ಈ ಸಂಧರ್ಭ ಎಸ್.ಡಿ.ಪಿ.ಐ ಮಲ್ಲೂರು ಗ್ರಾಮ ಸಮಿತಿ ಅಧ್ಯಕ್ಷರಾದ ಜುನೈದ್CP, PFI ಬದ್ರಿಯಾ ನಗರ ಯೂನಿಟ್ ಕಾರ್ಯದರ್ಶಿ ನಝೀರ್ ಬದ್ರಿಯಾ ನಗರ, ಕರ್ನಾಟಕ ಮುಸ್ಲಿಂ ಜಮಾಅತ್ ಮಲ್ಲೂರು ಗ್ರಾಮ ಸಮಿತಿ ಅಧ್ಯಕ್ಷರಾದ ನೌಫಾಲ್ ಉದ್ದಬೆಟ್ಟು, ಗಲ್ಫ್ ಗಯ್ಸ್ ಸೆಂಟ್ರಲ್ ಕಮಿಟಿ ಮಲ್ಲೂರು ಉಪಾಧ್ಯಕ್ಷರಾದ ಆದಂ ಪಾದೆ ಹಾಗೂ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.