dtvkannada

ಉಪ್ಪಿನಂಗಡಿ, ಫೆ. 28: ಕೆಂಪು ಕಲ್ಲು ಮೈ ಮೇಲೆ ಬಿದ್ದು ಮೂರು ವರ್ಷದ ಮಗುವೊಂದು ಮೃತಪಟ್ಟ ಹೃದಯವಿದ್ರಾವಕ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟಿ ಎಂಬಲ್ಲಿ ರಾತ್ರಿ ನಡೆದಿದೆ.

ಮೃತ ಮಗುವನ್ನು ಮಹಮ್ಮದ್ ನೌಶೀರ್(3) ಎಂದು ತಿಳಿದು ಬಂದಿದೆ. ಕಟ್ಟಡ ನಿರ್ಮಾಣಕ್ಕೆ ತಂದಿರುವ ಕೆಂಪು ಕಲ್ಲು ಮನೆಯ ಅಂಗಳದಲ್ಲಿ ಇಡಲಾಗಿತ್ತು. ಅದರ ಸಮೀಪ ಮೂರು ವರ್ಷದ ಮಗು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಲ್ಲು ಜರಿದು, ಮಗುವಿನ ಮೈಮೇಲೆ ಬಿದ್ದಿದೆ ಎನ್ನಲಾಗಿದೆ.

ಕುಪ್ಪೆಟಿ ನಿವಾಸಿ ಅಶ್ರಫ್ ಬೈತಾರ್ ಎಂಬವರ ಮಗು ಇಂದು ಸಂಜೆ ಹೊತ್ತಿಗೆ ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅಶ್ರಫ್- ಶಮೀಮಾ ದಂಪತಿಗೆ ಎರಡು ಹೆಣ್ಣು ಹಾಗೂ ಒಂದು ಗಂಡು ಮಗು ಇದ್ದು, ಇದೀಗ ಇದ್ದ ಓರ್ವ ಪುತ್ರನನ್ನು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮಳುಗಿದೆ.

By dtv

Leave a Reply

Your email address will not be published. Required fields are marked *

error: Content is protected !!