ಕುಂಬ್ರ: ಹಿಜಾಬ್ ವಿರುದ್ಧದ ಹೈಕೋರ್ಟ್ ತೀರ್ಪಿನ ವಿರುದ್ಧ ಅಮೀರೆ ಶರೀಯಾ ಸಂಘಟನೆ ನೀಡಿರುವ ಕರ್ನಾಟಕ ಬಂದ್ಗೆ ಅರಿಯಡ್ಕ ಜಮಾಹತ್ ಸಮಿತಿ ಬೆಂಬಲ ಸೂಚಿಸಿದೆ.
![](http://dtvkannada.in/wp-content/uploads/2022/03/IMG-20220317-WA0000-1024x570.jpg)
ಹೈಕೋರ್ಟ್ ಹಿಜಾಬ್ ವಿರುದ್ಧ ನೀಡಿರುವ ತೀರ್ಪಿನ ವಿರುದ್ಧ ಅಮೀರೆ ಶರಿಯಾ ಸಂಘಟನೆ ನಾಳೆ (17/03/2022) ಕರ್ನಾಟಕ ಬಂದ್ಗೆ ಕರೆನೀಡಿತ್ತು. ಇದಕ್ಕೆ ನೂರಾರು ಮುಸ್ಲಿಂ ಸಂಘಟನೆಗಳು ಬೆಂಬಲ ನೀಡಿದೆ.
ರಾಜ್ಯಾದ್ಯಂತ ಕರೆ ನೀಡಿರುವ ಶಾಂತಿಯುತ ಬಂದ್ ಗೆ ಬೆಂಬಲವಾಗಿ ಅರಿಯಡ್ಕ ಜುಮಾ ಮಸೀದಿ ಜಮಾಅತಿನ ಮತ್ತು ಪರಿಸರದ ಎಲ್ಲಾ ವ್ಯಾಪಾರಸ್ಥರು,ಅಟೋ ಚಾಲಕರು ಶಿಕ್ಷಣ ಸಂಸ್ಥೆಗಳು ಮತ್ತು ಇತರರು ನಾಳೆ(17/03/2022) ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲು ಕರೆ ನೀಡಿದ್ದಾರೆ.
![](http://dtvkannada.in/wp-content/uploads/2022/03/IMG-20220317-WA0001.jpg)
ನಾಳಿನ (17/03/2022) ಕರ್ನಾಟಕ ಬಂದ್ಗೆ ಅರಿಯಡ್ಕ ಜಮಾಹತ್ ಸಮಿತಿ ಸಂಪೂರ್ಣ ಬೆಂಬಲ ನೀಡುವುದಾಗಿ ಅಧ್ಯಕ್ಷರಾದ ಅರಿಯಡ್ಕ ಅಬ್ದುಲ್ ರಹ್ಮಾನ್ ಹಾಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.