dtvkannada

ಬಂಟ್ವಾಳ: ಬಸ್‌ನಲ್ಲಿ ಕಂಪೆನಿಯ ಮ್ಯಾನೇಜರ್‌ ಜೊತೆ ಹೋಗುತ್ತಿದ್ದ ಮಹಿಳಾ ಸುಪರ್ವೈಸರ್ ಅನ್ನು ತಡೆದು ನಿಲ್ಲಿಸಿ ಜೀವ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಸರಗೋಡು ಮೂಲದ ಮಹಿಳೆಯೊಬ್ಬರು ಖಾಸಗಿ ಕಂಪೆನಿಯಲ್ಲಿ ಸುಪರ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು, ಮಾ. 17 ರಂದು ಕಂಪೆನಿಯ ಮ್ಯಾನೇಜರ್ ಜೊತೆ ಪುತ್ತೂರಿನ ರಿಲಾಯನ್ಸ್ ಅಂಗಡಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹೋಗುತ್ತಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಂಟ್ವಾಳದ ಕುದ್ರೆಬೆಟ್ಟು ಎಂಬಲ್ಲಿ ಬಸ್ಸು ತಲುಪಿದಾಗ, 2-3 ಅಪರಿಚಿತ ವ್ಯಕ್ತಿಗಳು ಮಹಿಳೆ ಮತ್ತು ಅವರ ಜೊತೆಯಲ್ಲಿದ್ದ ಮ್ಯಾನೇಜರ್‌ ಹೆಸರು ಕೇಳಿ, ಇನ್ನು ಮುಂದಕ್ಕೆ ಜೊತೆಯಲ್ಲಿ ಹೋಗಬಾರದೆಂದು ಬೆದರಿಸಿ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

By dtv

Leave a Reply

Your email address will not be published. Required fields are marked *

error: Content is protected !!