ಶ್ರೀ ನಿವಾಸಪುರ: ಹಿಜಾಬ್ ಆಯಿತು, ಹಲಾಲ್ ಆಯಿತು, ಧ್ವನಿವರ್ಧಕ ಆಯಿತು ಇದೀಗ ಹಿಂದೂ ಮುಖಂಡರಿಂದ ಮಾವು ಬ್ಯಾನ್ ಅಭಿಯಾನ ಶುರುವಾಗಿದೆ.
ದೇಶ ವಿದೇಶಗಳಲ್ಲಿ ಬಾರಿ ಪ್ರಸಿದ್ದಿ ಪಡೆದಿರುವ ಮಾವಿನ ನಗರಿ ಶ್ರೀ ನಿವಾಸೀಪುರ ಮಾರ್ಕೆಟ್ ನಲ್ಲಿ ಇದೀಗ ಧರ್ಮ ದಂಗಲ್ ಏರ್ಪಟ್ಟಿದೆ.
ಮೇ ತಿಂಗಳಿನಿಂದ ಶುರುವಾಗುವ ಮಾವು ವ್ಯಾಪಾರವನ್ನು ಹಿಂದೂಗಳಿಂದ ಮಾತ್ರವೇ ಖರೀದಿಸಬೇಕೆಂದು ಇದೀಗ ಸೋಶಿಯಲ್ ಮಿಡಿಯಾದಲ್ಲಿ ಮೆಸೇಜ್ ವೈರಲ್ ಆಗುತ್ತಿದೆ.
ಇದೀಗ ಹಾಸನದಲ್ಲೂ ಈ ಕೂಗು ಕೇಳಿ ಬರುತ್ತಿದೆ.
ಹಿಂದೂ ವರ್ತಕರಿಗೆ ಮಾತ್ರವೇ ಮಾವು ಮಂಡಿ ಕೊಡಿ, ಹಿಂದುಗಳ ಮಂಡಿಯಲ್ಲಿ ಮಾತ್ರವೇ ಮಾವು ಮಾರಾಟ ಮಾಡಲು ಹಿಂದೂ ಮುಖಂಡರು ಮನವಿ ಮಾಡಿದ್ದಾರೆ.
ಶ್ರೀನಿವಾಸಪುರದಲ್ಲಿ ಒಟ್ಟು 120 ಮಂಡಿಗಳಿದ್ದು ಅದರಲ್ಲಿ 70 ಮುಸಲ್ಮಾನರ ಮಂಡಿಗಳು 50 ಹಿಂದೂಗಳ ಮಂಡಿಗಳಿವೆ.
ಪ್ರತಿ ಬಾರಿ ಒಟ್ಟು40 ಲಕ್ಷ ಟನ್ ಮಾವು ಮಾರಾಟವಾಗುತ್ತಿದೆ.