ಮಂಗಳೂರು: ಮೂರು ದಿನದ ಹಿಂದೆ ಮಂಜೇಶ್ವರ ಬಳಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಂಜನಾಡಿ ಸಮೀಪದ ನರಿಂಗಾನ ಗ್ರಾಮದ ಪೊಟ್ಟೋಳಿಕೆಯ ಸಾರ್ತಬೈಲ್ ನಿವಾಸಿ ಅನ್ಸಾರ್ (20) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಳೆದ ವಾರ ಮಂಜೇಶ್ವರದ ಪೊಸೋಟು ಗೋವಿಂದ ಪೈ ಕಾಲೇಜು ಸಮೀಪ ಇನ್ನೊವಾ ಕಾರು ಮತ್ತು ಕೆಎಸ್ಆರ್’ಟಿಸಿ ಬಸ್ಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಘಟನೆಯಲ್ಲಿ ಕಾರಿನಲ್ಲಿದ್ದ ಮೂವರಿಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು. ಗಂಭೀರ ಗಾಯಗೊಂಡಿದ್ದ ಅನ್ಸಾರ್ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ನಿನ್ನೆ (11-04-2022) ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿರುವುದಾಗಿ ವರದಿಯಾಗಿದೆ. Ssf ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಯುವಕ, ಉತ್ತಮ ಸ್ನೇಹಿತರ ಬಳಗವನ್ನು ಹೊಂದಿದ್ದ.
ಮೃತ ಯುವಕ ತಾಯಿ ಇಬ್ಬರು ಸಹೋದರರು ಹಾಗೂ ಒಬ್ಬಾಕೆ ಸಹೋದರಿಯನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.