ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ SYS ಕುಂತೂರು ಬ್ರಾಂಚ್ ಹಾಗೂ ಸುನ್ನೀ ಸ್ಟೂಡೆಂಟ್ಸ್ ಫಡರೇಶನ್ SSF ಕುಂತೂರು ಯುನಿಟ್ ವತಿಯಿಂದ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮ ಎಸ್. ಎಸ್. ಎಫ್ ಯೂನಿಟ್ ಕಚೇರಿ ಕುಂತೂರುನಲ್ಲಿ ನಡೆಯಿತು.
ಕುಂತೂರು ಯುನಿಟ್ ವ್ಯಾಪ್ತಿಯ ಅತೀ ಕಡು ಬಡವ ಯತೀಂ ಆದ ಸುಮಾರು 42 ಕುಟುಂಬಗಳಿಗೆ ಅವರ ಮನೆ ಮನೆಗೆಗೆ ತೆರಳಿ ರಂಝಾನ್ ಕಿಟ್ ವಿತರಿಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಸಲಹಾ ಸಮಿತಿ ಸದಸ್ಯ ಪುತ್ತುಮೋನು ಗಾಂಜಾಲ್, ಉಪಾಧ್ಯಕ್ಷ ಕೆ ಆರ್ ಹಮೀದ್, ಸದಸ್ಯರಾದ ಹನೀಫ್ ಕೆ ಎಸ್ ಆರ್ ಟಿ ಸಿ, ಸಂಶು ಸಫ ಕೋಚಕಟ್ಟೆ, ಅಬ್ದುಲ್ ಲತೀಫ್ ಸುರುಳಿ. ಸಾಬಿತ್ ಕೆ ಆರ್,ಅಬ್ದುಲ್ ಸಲಾಂ ಪೂಂಜ,ಅಶ್ರಫ್ ಬೇಳ್ಪಾಡಿ, ಅಬ್ದುರ್ರಝಾಖ್ ಲತೀಫಿ,ಹಂಝಾ ಅಜ್ಮೀರ್ ಶರೀಫ್ ಮತ್ತು ಹಲವಾರು ಸದಸ್ಯರು ಉಪಸ್ಥಿತರಿದ್ದರು.