dtvkannada

ಪಾಲಕ್ಕಾಡ್: ಮಸೀದಿಗೆ ತೆರಳಿ ಶುಕ್ರವಾರದ ವಿಶೇಷ ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಾಲಕ್ಕಾಡ್ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಝುಬೈರ್ ಎಂಬವರನ್ನು ಆರ್,ಎಸ್,ಎಸ್ ಕಾರ್ಯಕರ್ತರು ಮಾರಕಾಯುಧಗಳಿಂದ ಹತ್ಯೆ ಮಾಡಿದ ಘಟನೆ ಪಾಲಕ್ಕಾಡ್ ಎಲ್ಲಪುಳ್ಳಿ ಮಸೀದಿ ಹತ್ತಿರ ನಡೆದಿದೆ.

ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಝುಬೈರ್ ಎಂಬವರನ್ನು ಎರಡು ಕಾರುಗಳಲ್ಲಿ ಬಂದ ಆರ್,ಎಸ್,ಎಸ್ ಕಾರ್ಯಕರ್ತರ ತಂಡ ಝುಬೈರ್ ಇದ್ದ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ನೆಲಕ್ಕೆ ಬಿದ್ದ ಝುಬೈರ್ ರವರ ಮೇಲೆ ಆರ್,ಎಸ್,ಎಸ್ ಕಾರ್ಯಕರ್ತರು ಮಾರಕಾಯುದಗಳಿಂದ ಹತ್ಯೆಗೈದಿದ್ದಾರೆ.


ಪಾಲಕ್ಕಾಡ್ ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

By dtv

Leave a Reply

Your email address will not be published. Required fields are marked *

error: Content is protected !!