ಮಂಗಳೂರು: ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಸೈಡ್ ಕೊಡುವ ಭರದಲ್ಲಿ ಮಗುಚಿಬಿದ್ದ ಪರಿಣಾಮ ಲಾರಿಯ ಮೇಲಿದ್ದ ಹಿಟಾಚಿ ಚರಂಡಿಗೆ ಮಗುಚಿ ಬಿದ್ದಿದೆ.
![](http://dtvkannada.in/wp-content/uploads/2022/04/IMG-20220419-WA0036-1024x768.jpg)
ಈ ಘಟನೆ ಮಂಗಳೂರು ಹೊರವಲಯದ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವಿನಲ್ಲಿ ಸಂಭವಿಸಿದೆ.
ಎಡಪದವು ವಿವೇಕಾನಂದ ಪಿಯು ಕಾಲೇಜಿನ ಬಳಿ ಈ ದುರ್ಘಟನೆ ಸಂಭವಿಸಿದ್ದು ದುರ್ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.
![](http://dtvkannada.in/wp-content/uploads/2022/04/IMG-20220419-WA0035.jpg)
ಮಂಗಳೂರು ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಬೃಹತ್ ಗಾತ್ರದ ಹಿಟಾಚಿಯನ್ನು ಹೊತ್ತೊಯ್ಯುತ್ತಿದ್ದ ಲಾರಿ
ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಸೈಡ್ ನೀಡಲು ಹೋಗಿ ಈ ಅಫಘಾತ ಸಂಭವಿಸಿದೆ.