ಉಪ್ಪಿನಂಗಡಿ: ಉಪ್ಪಿನಂಗಡಿಯ ಅಡಿಕೆ ವ್ಯಾಪಾರಸ್ಥರು ನೆಕ್ಕಿಲಾಡಿ ಮಸ್ಜಿದುಲ್ ಹುದಾ ಇದರ ಜಮಾಅತ್ ಸದಸ್ಯ , ಖ್ಯಾತ ಬರಹಗಾರ್ತಿ ಸಿಹಾನ ಬಿ.ಎಂ ರವರ ತಂದೆ ಇಬ್ರಾಹಿಂ ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಉಪ್ಪಿನಂಗಡಿಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದ ಇಬ್ರಾಹಿಂ ರವರು ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಚಿರ ಪರಿಚಿತರು
ಮೃತರ ದಫನ ಕಾರ್ಯ ಬುಧವಾರ ಬೆಳಿಗ್ಗೆ ಹತ್ತು ಗಂಟೆಗೆ ಮಸ್ಜಿದುಲ್ ಹುದಾ ನೆಕ್ಕಿಲಾಡಿ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.