ಸುಳ್ಯ: ರಜಾ ದಿನ ಕಳೆಯಲು ಅಜ್ಜಿ ಮನೆಗೆ ತೆರಳಿದ್ದ ಬಾಲಕನೋರ್ವ ಹೊಳೆಯಲ್ಲಿ ಆಟವಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸುಳ್ಯದ ಅರಂತೋಡಿನಲ್ಲಿ ನಿನ್ನೆ ಸಂಜೆ ನಡೆದಿದೆ.
ಮೃತ ಬಾಲಕನನ್ನು ಮನ್ವಿತ್(12) ಎಂದು ಗುರುತಿಸಲಾಗಿದೆ.
ರಜೆಯ ಸಮಯವಾದರಿಂದ ಮಂಗಳೂರಿನ ಬಾಲಕ ಮನ್ವಿತ್ ಕುಕ್ಕುಂಬಳ ತನ್ನ ಅಜ್ಜನ ಮನೆಗೆ ಬಂದಿದ್ದನು. ಸಂಜೆ ಇಬ್ಬರು ಬಾಲಕರು ಸ್ನಾನ ಮಾಡಲು ಕುಕ್ಕುಂಬಳ ಹೊಳೆಗೆ ತೆರಳಿದ್ದರು.
ಸ್ನಾನ ಮಾಡುತ್ತ ಆಡವಾಡುತ್ತಿದ್ದಾಗ ಮನ್ವಿತ್ ನೀರಿನ ಸೆಳೆತೆಗೆ ಸಿಲುಕಿಕೊಂಡು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ನೀರಲ್ಲಿ ಮುಳುಗಿದ ವಿಷಯವನ್ನು ಜತೆಯಲ್ಲಿದ್ದ ಬಾಲಕ ಮನೆಯವರಿಗೆ ಬಂದು ತಿಳಿಸಿದ್ದಾನೆ. ಬಳಿಕ ಶರತ್ ಅಡ್ಯಡ್ಕ, ನಿಧೀಶ್ ಅರಂತೋಡು, ತಾಜುದ್ದೀನ್ ಅರಂತೋಡು, ಮುನೀರ್ ಸಂಟ್ಯಾರ್, ಫಯಾಜ್ ಪಟೇಲ್, ಸಂಸುದ್ದೀನ್ ಪೇಲ್ತಡ್ಕ ರವರು ಕಾರ್ಯಾಚರಣೆ ಮಾಡಿ ಮೃತದೇಹ ಮೇಲಕ್ಕೆತ್ತಿದ್ದಾರೆ.
ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.