ಕೊಡಗು: ರಂಝಾನ್ ಹಬ್ಬದ ಪ್ರಯುಕ್ತ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆಯೂ SSF ಕಾಗಾಡಿಕಟ್ಟೆ ಯುನಿಟ್ ವತಿಯಿಂದ ಇತ್ತೀಚೆಗೆ ನಡೆಯಿತು.
![](http://dtvkannada.in/wp-content/uploads/2022/04/IMG-20220501-WA0035.jpg)
ಪ್ರತಿವರ್ಷವೂ ಹಲವಾರು ಸಾಮುದಾಯಿಕ ಸೇವೆಗಳೊಂದಿಗೆ ಮುಂದೆ ಬರುತ್ತಿರುವ SSF ಕಾಗಡಿಕಟ್ಟೆ ಯುನಿಟ್ ಕಾರ್ಯಕರ್ತರ ಪರಿಶ್ರಮಕ್ಕೆ ಊರವರು ಪ್ರಶಂಸೆ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ
SYS ಕಾಗಡಿಕಟ್ಟೆ ಬ್ರಾಂಚ್ ಸೆಕ್ರೆಟರಿ ಯೂಸುಫ್ ರವರು ಹಾಗೂ SYS ಕಾರ್ಯಕರ್ತರಾದಂತಹ ಇಬ್ರಾಹಿಂ ಸಾಗರ್ ರವರು ಮತ್ತು SYS ಕಾರ್ಯಕರ್ತರಾದಂಥಹ ಶರೀಫ್ ಹುಮೈದಿ ಉಸ್ತಾದ್ ಹಾಗೂ ಹಜೀಝ್ ಮುಸ್ಲಿಯಾರ್ ಸುಂಟಿಕೊಪ್ಪ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು SSF ಕಾಗಡಿಕಟ್ಟೆ ಯುನಿಟಿನ ಅಧ್ಯಕ್ಷರಾದಂಥಹ ಮನ್ಸೂರ್ ರವರು ಉದ್ಘಾಟನೆ ಗೈದರು. ಹಜೀಝ್ ಮುಸ್ಲಿಯಾರ್ ಸುಂಟಿಕೊಪ್ಪ ರವರ ದುವಾದೊಂದಿಗೆ ಕಾರ್ಯಕ್ರಮವು ನೆರವೇರಿತು.