dtvkannada

ಉಪ್ಪಿನಂಗಡಿ: ಮನಸ್ಸುಗಳನ್ನು ಸಂಶುದ್ದಗೊಳಿಸುವ ಮೂಲಕ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂದು ಹಂಝ ಸಖಾಫಿ ಅಲ್-ಅಝ್ಹರಿ ಈದ್ ಸಂದೇಶ ನೀಡಿದರು.

ಕೋಪ ಹಗೆತನ ಎಲ್ಲವನ್ನೂ ಇಂದಿಗೆ ಪೂರ್ಣ ವಿರಾಮ ಹಾಕಿ ಸಂಶುದ್ದವಾದ ಮನಸ್ಸುಗಳೊಂದಿಗೆ ಪವಿತ್ರವಾದ ಈದ್ ಹಬ್ಬವನ್ನು ಸಂಭ್ರಮಗೊಳಿಸಬೇಕೆಂದು ಮತ್ತು ನಾಡಿನ ಸೌಹಾರ್ದತೆಯ ನಾಳೆಗಾಗಿ ಪ್ರತಿಯೊಬ್ಬರು ಮನಬಿಚ್ಚಿ ಪ್ರಾರ್ಥಿಸಬೇಕೆಂದು ಅವರು ಇಂದು ಕೇಂದ್ರ ಜುಮ್ಮಾ ಮಸ್ಜಿದ್ ತೆಕ್ಕಾರು ಇಲ್ಲಿ ಈದುಲ್ ಫಿತ್ರ್ ಹಬ್ಬದ ಸಂದೇಶ ನೀಡಿ ಮಾತನಾಡಿದರು.

ಇದೇ ವೇಳೆ SSF ತೆಕ್ಕಾರು ಯುನಿಟ್ ವತಿಯಿಂದ Enhance India ಕಾರ್ಯಕ್ರಮದ ಅಂಗವಾಗಿ Eid of gift ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಾರ್ವಜನಿಕರಿಗೆ ಈದ್ ದಿನದ ಅಂಗವಾಗಿ ಸಿಹಿ ಪಾನಕ ವಿತರಿಸಲಾಯಿತು.

ತೆಕ್ಕಾರು ವ್ಯಾಪ್ತಿಯ ಜನತೆ ಪರಸ್ಪರ ಆಲಿಂಗನ ಮಾಡಿ ಈದ್ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು

By dtv

Leave a Reply

Your email address will not be published. Required fields are marked *

error: Content is protected !!