ಪುತ್ತೂರು: ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೆ ಮೃತಪಟ್ಟಿದ್ದು, ಮತ್ತೋರ್ವ ಯುವಕ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
![](http://dtvkannada.in/wp-content/uploads/2022/05/IMG-20220504-WA0045-1024x576.jpg)
ಅಪಘಾತದಲ್ಲಿ ಮೃತಪಟ್ಟ ಅರಿಯಡ್ಕ ನಿವಾಸಿ ಸಿನಾನ್(18) ಎಂಬ ಯುವಕನ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದು, ಇದೀಗ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಪ್ಪಳಿಗೆ ಮಸೀದಿಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಿರ್ವಹಿಸಲು ಕರೆ ತರಲಾಗಿದೆ.
![](http://dtvkannada.in/wp-content/uploads/2022/05/IMG-20220504-WA0047-1024x576.jpg)
ಸಂಜೆ ಸುಮಾರು 7:00 ಗಂಟೆಗೆ ಯುವಕನ ಮೃತದೇಹ ಮಸೀದಿಯಿಂದ ಅರಿಯಡ್ಕದ ಮನೆಗೆ ತಲುಪಲಿದೆ ಎಂದು ತಿಳಿದು ಬಂದಿದೆ.