ಸುಳ್ಯ: ತಾಲೂಕಿನ ಗಾಂಧಿ ನಗರ ಎಂಬಲ್ಲಿನ ನವ ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಡೆದಿದೆ.
![](http://dtvkannada.in/wp-content/uploads/2022/05/IMG-20220507-WA0011.jpg)
ಆತ್ಮಹತ್ಯೆ ಮಾಡಿಕೊಂಡ ಯುವತಿ ಸುಳ್ಯ ಗಾಂಧಿನಗರ ನಿವಾಸಿ ಆಮಿನಾ ಎಂಬವರ ಪುತ್ರಿ ಆಯಿಷಾ ಎಂದು ತಿಳಿದು ಬಂದಿದ್ದು ಆತ್ಮಹತ್ಯೆ ಮಾಡಲು ನಿಖರವಾದ ಕಾರಣ ಏನೆಂದು ತಿಳಿದುಬಂದಿಲ್ಲ .
ಗಾಂಧಿನಗರದ ಕೆರೆಮೂಲೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಆಯಿಷಾ ಮನೆಯ ಫ್ಯಾನ್ ಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯವರು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದ್ದು ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
![](http://dtvkannada.in/wp-content/uploads/2022/05/074fec79-7e15-499f-be39-cebd0999f78b-746x1024.jpg)
![](http://dtvkannada.in/wp-content/uploads/2022/05/IMG-20220503-WA0032.jpg)
ಆಯಿಷಾ ರವರು ಎಂಟು ತಿಂಗಳ ಹಿಂದೆಯಷ್ಟೇ ಕಾಸರಗೋಡು ಮಂಙಪಾರೆಯ ಯುವಕನೊಂದಿಗೆ ನಿಶ್ಚಿತಾರ್ಥ ನಡೆಸಿಕೊಂಡಿದ್ದು ಇವರ ಪತಿಯಾಗುವವರು ವಿದೇಶದಲ್ಲಿದ್ದಾರೆಂದು ವರದಿಯಾಗಿದೆ.