ಪುತ್ತೂರು: ಕಳೆದ ಬುಧವಾರ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ನಡೆದ ಭೀಕರ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಮ್ಮದ್ ಹಾಶಿರ್ ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
![](http://dtvkannada.in/wp-content/uploads/2022/05/IMG-20220507-WA0077-1024x651.jpg)
ಮೃತ ಪಾರ್ಥಿವ ಶರೀರವವನ್ನು ಮಂಗಳೂರಿನ ಯೇನಪೋಯ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುತ್ತಾರ್ ಮದನಿನಗರ ಮಸೀದಿಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಿರ್ವಹಿಸಿ ರಾತ್ರಿ ಸುಮಾರು 10:00 ಗಂಟೆಗೆ ಯುವಕನ ಮನೆ ಸಂಟ್ಯಾರ್’ಗೆ ತಲುಪಲಿದೆ.
![](http://dtvkannada.in/wp-content/uploads/2022/05/074fec79-7e15-499f-be39-cebd0999f78b-746x1024.jpg)
![](http://dtvkannada.in/wp-content/uploads/2022/05/IMG-20220503-WA0032.jpg)
ಅಂತಿಮ ದರ್ಶನಕ್ಕೆ ಆಗಮಿಸುವವರ ಗಮನಕ್ಕೆ:-
ಮಹಮ್ಮದ್ ಹಾಶಿರ್ ಮಯ್ಯತ್ತ್ ಪರಿಪಾಲನೆ ಕಾರ್ಯ ಮಂಗಳೂರಿನಲ್ಲಿ ನಡೆಸಿ ರಾತ್ರಿ 10:00ಗಂಟೆಗೆ ಅವರ ಮನೆಗೆ ತಲುಪಲಿದೆ. ಮನೆಯಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲದ ಕಾರಣ ಸ್ತ್ರೀಯರಿಗೆ ಮಾತ್ರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಳಿದವರು ಮನೆಯಿಂದ ಸಂಟ್ಯಾರು ಮಸೀದಿಗೆ ತಲುಪಿದ ನಂತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 10:30 -11:00 ಗಂಟೆಯ ಒಳಗಾಗಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.