dtvkannada

ವಿಟ್ಲ: ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಪೊಷಕರು ಟಿವಿ ನೋಡಬೇಡ ಎಂದು ಬುದ್ಧಿವಾದ ಹೇಳಿದಕ್ಕೆ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಪುಚ್ಚೆಗುತ್ತು ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಬಾಲಕ ವಿಟ್ಲದ ಜೋಗಿಬೆಟ್ಟು ನಿವಾಸಿಯಾದ ವಾಮನ ಪೂಜಾರಿಯ ಮಗನಾದ ಉಜ್ವಲ್(14) ಎಂದು ತಿಳಿದು ಬಂದಿದೆ.

ಮೃತಪಟ್ಟ ಬಾಲಕನು ವಿಟ್ಲ ಮಾದರಿ ಶಾಲೆಯ ವಿದ್ಯಾರ್ಥಿ ಎನ್ನಲಾಗಿದ್ದು ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಪೋಷಕರು ಟಿವಿ ನೋಡಬೇಡ ಟಿವಿ ನೋಡುವುದರಿಂದ ಆಗುವ ಅನಾಹುತ ನಷ್ಟ ಕಷ್ಟಗಳ ಬಗ್ಗೆ ಬುದ್ದಿವಾದ ಹೇಳಿದ್ದರೆಂದು ತಿಳಿದು ಬಂದಿದೆ.

ಇದರಿಂದ ನೊಂದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!