ಸುಳ್ಯ: ಜನರ ಸಾಧನೆಯನ್ನು ಗುರುತಿಸಿ ಅವರಿಗೆ ಆಯ ಕ್ಷೇತ್ರದಲ್ಲಿ ಗೌರವಿಸುವ ಕಾರ್ಯಕ್ರಮ ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ವತಿಯಿಂದ ಪ್ರತಿ ವರ್ಷ ನಡೆಯುತ್ತಿದ್ದು. ಈ ವರ್ಷ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಹರೀಶ್ ಪುತ್ತೂರು ಅವರನ್ನು ಆಯ್ಕೆ ಮಾಡಿದೆ.

ಪ್ರತಿಕೋದ್ಯಮ ಕ್ಷೇತ್ರದಲ್ಲಿ ಮಾಡಿರುವ ಕಾರ್ಯಗಳು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು 2022 ನೇ ಸಾಲಿನ ಸಂಸ್ಥೆಯಿಂದ ಕೊಡಬಯಸುವ ಪ್ರಶಸ್ತಿಯ ಗರಿ ಹರೀಶ್ ಪುತ್ತೂರು ರವರಿಗೆ ಲಭಿಸುತ್ತಿದ್ದು ತುಮಕೂರಿನಲ್ಲಿ ನಡೆಯುವ ಪ್ರಥಮ ವರ್ಷದ ರಾಜ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
ಉತ್ತಮ ಬರಹಗಾರರಾಗಿರುವ ಶ್ರೀಯುತರು ಆಗಿದ್ದು ಸುಳ್ಯ ತಾಲೂಕಿನ ಕೊಡಿಯಾಲದ ಬಾಬು ಎಚ್ ಆರ್ ಮತ್ತು ಕಮಲ ದಂಪತಿಯ ಪುತ್ರರಾಗಿದ್ದು ಖಾಸಾಗಿ ಸುದ್ದಿ ವಾಹಿನಿಯೊಂದರಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ