ಮಂಗಳೂರು : SDPI ಯ ಫ್ಲಾಗನ್ನು ಹಿಡಿದುಕೊಂಡ ಯುವಕರ ಗುಂಪೊಂದು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂಬ ಆರೋಪದಡಿಯಲ್ಲಿ ಕಂಕನಾಡಿ ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ ಬಗ್ಗೆ ವರದಿಯಾಗಿದೆ.
![](http://dtvkannada.in/wp-content/uploads/2022/05/img_5176.jpg)
ಮಂಗಳೂರು ಕಣ್ಣೂರಿನಲ್ಲಿ ಮೇ 27 ರಂದು SDPI ದ.ಕ. ಜಿಲ್ಲಾ ಸಮಿತಿ ವತಿಯಿಂದ ಜನಾಧಿಕಾರ ಸಮಾವೇಶದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಸಹಸ್ರಾರು SDPI ಕಾರ್ಯಕರ್ತರು ತಮ್ಮ ತಮ್ಮ ವಾಹನಗಳಲ್ಲಿ ಬಂದಿದ್ದು ಆದರೆ ಈ ಮಧ್ಯೆ SDPIಯ ಯುವಕರಿದ್ದ ಗುಂಪೊಂದು ತಮ್ಮ ವಾಹನದಲ್ಲಿ ಪೊಲೀಸರು ವಿರುದ್ಧ ಅವಾಚ್ಯ ಪದ ಬಳಕೆ ಮಾಡಿ ನಿಂದಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
![](http://dtvkannada.in/wp-content/uploads/2022/05/IMG-20220529-WA0088.jpg)
ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಚೆಕ್ ಪೋಸ್ಟ್ ಕರ್ತವ್ಯದಲ್ಲಿ ASI ಚಂದ್ರಶೇಖರ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 143 , 353 , 504 , 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಲ್ಲದೆ ಕರ್ತವ್ಯದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಸಂಗನ ಗೌಡ ಎಂಬಾತನ ಮೈಮೇಲೆ ಬೈಕ್ ಹಾಯಿಸುವ ರೀತಿಯಲ್ಲಿ ಆರೋಪಿಗಳು ತಮ್ಮ ಬೈಕನ್ನು ಸವಾರಿ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎಂದು ಕೂಡ ದೂರಲಾಗಿದೆ. ಸದ್ಯ ಅಪರಿಚಿತ 5 ಮಂದಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.