ಬೆಂಗಳೂರು: ಯುವತಿಯೋರ್ವಳನ್ನು ಹಿಂದೆ ಕೂರಿಸಿಕೊಂಡು ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಮರಕ್ಕೆ ಢಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.
![](http://dtvkannada.in/wp-content/uploads/2022/06/IMG-20220604-WA0013.jpg)
ಭೀಕರ ಅಪಘಾತದಲ್ಲಿ ಮೃತಪಟ್ಟವರು ಗಗನ್ ದೀಪ್ (29) ಯಶಸ್ವಿನಿ (23) ತಿಳಿದು ಬಂದಿದೆ.
ಇವರಿಬ್ಬರು ಪ್ರೆಸ್ಟೀಜ್ ಕಂಪೆನಿಯ ಉದ್ಯೋಗಿಗಳಾಗಿದ್ದು ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕ್ ಕಂಟ್ರೋಲ್ಗೆ ಸಿಗದೆ ಮರಕ್ಕೆ ಗುದ್ದಿದ್ದಾರೆಂದು ತಿಳಿದು ಬಂದಿದೆ.
![](http://dtvkannada.in/wp-content/uploads/2022/06/IMG-20220602-WA0048-682x1024.jpg)
ಇದರ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈಗ ಸರ್ಜಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.