ಕುಂಬ್ರ: ನಿವೃತ್ತ ಅರಣ್ಯಾಧಿಕಾರಿಯೊರ್ವರು ತಮ್ಮ ಸ್ವಗೃಹದಲ್ಲಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿದ ಘಟನೆ ಇಂದು ನಡೆದಿದೆ.

ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಡೆದಾಡಲು ಕಷ್ಟಪಡುತ್ತಿದ್ದು ಇದರಿಂದ ಜಿಗುಪ್ಸೆಗೊಂಡು ನೊಂದು ಆತ್ಮಹತ್ಯೆ ಮೊಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದ್ದು ಮೃತ ವ್ಯಕ್ತಿ ಶೀನಪ್ಪ ಗೌಡ(62) ಎಂದು ತಿಳಿದು ಬಂದಿದೆ.
ಇವರ ಪತ್ನಿ ಸರಕಾರಿ ಶಾಲಾ ಅಧ್ಯಾಪಕಿಯಾಗಿದ್ದು ಎರಡು ಹೆಣ್ಣು ಹಾಗೂ ಒರ್ವ ಗಂಡು ಮಕ್ಕಳಿದ್ದು ಇಬ್ಬರು ಹೆಣ್ಣು ಮಕ್ಕಳು ಡಾಕ್ಟರ್ ಪದವಿ ಪಡೆದು ವೃತ್ತಿಯಲ್ಲಿದ್ದರೆ ಮಗ ಇಂಜಿನಿಯರಾಗಿ ವೃತ್ತಿಯಲ್ಲಿದ್ದಾರೆಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬರಬೇಕಾಗಿದೆ.