ಮಂಗಳೂರು: ಟ್ರಿಪ್ ಮುಗಿಸಿದ ನಂತರ ಬಸ್ ನಿಲ್ಲಿಸಿ ಡ್ರೈವರ್ ಮತ್ತು ನಿರ್ವಾಹಕರು ಊಟ ಮಾಡಲು ತೆರಳಿದ್ದ ವೇಳೆ ಒರ್ವ ಖದೀಮ ಬಸ್ನಲ್ಲಿ ಇಟ್ಟಿದ್ದ ಕಲೆಕ್ಷನ್ ಹಣ ಎಗರಿಸಿದ ಘಟನೆ ನಗರದ ಸ್ಟೇಟ್ಬ್ಯಾಂಕ್ನಲ್ಲಿ ನಿನ್ನೆ ನಡೆದಿದೆ.
![](http://dtvkannada.in/wp-content/uploads/2022/06/IMG-20220613-WA0009.jpg)
ಬಸ್ ಏರಿದ ಕಳ್ಳ ಯಾರು ಇಲ್ಲದನ್ನು ನೋಡಿ ಕಂಡಕ್ಟರ್ ಪರ್ಸ್ನಲ್ಲಿದ್ದ ಕಲೆಕ್ಷನ್ ಮಾಡಿದ 4,500 ರೂಪಾಯಿಗಳನ್ನು ಎಗರಿಸಿ ಜಾಗ ಖಾಲಿ ಮಾಡಿದ್ದಾನೆಂದು ತಿಳಿದು ಬಂದಿದೆ.
ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿದ್ದು ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.