ಪುತ್ತೂರು: ಜ್ವರದಿಂದ ಬಳಲುತ್ತಿದ್ದ 8ನೇ ತರಗತಿ ವಿದ್ಯಾರ್ಥಿನಿ ಡಿಡೀರ್ ಮೃತಪಟ್ಟ ಹೃದಯವಿದ್ರಾವಕ ಘಟನೆ ಗುರುವಾರ ಸವಣೂರಿನಲ್ಲಿ ನಡೆದಿದೆ.
ಸವಣೂರು ಚಾಪಲ್ಲಾ ಜಮಾಅತ್ ಗೆ ಒಳಪಟ್ಟ ಶಾಂತಿನಗರ ನಿವಾಸಿಯಾಗಿರುವ ಉಮರ್ (ಬೀಡಿ)ಯವರ ಸಹೋದರಿಯ ಮಗಳು ಮಾಂತೂರು ಹಿದಾಯತುಲ್ ಇಸ್ಲಾಂ ಮದರಸ ಎಂಟನೇ ತರಗತಿ ವಿದ್ಯಾರ್ಥಿನಿ ಅಫ್ರೀಝಾ ಮೃತ ಬಾಲಕಿ.
ವರುಷಗಳ ಹಿಂದೆ ತಂದೆ ಬಿಟ್ಟುಹೋಗಿದ್ದು, 5 ವರ್ಷದ ಹಿಂದೆಯಷ್ಟೇ ತಾಯಿ ನಿಧನ ಹೊಂದಿದ್ದರು. ನಂತರ ಕುಟುಂಬಿಕರ ಆಸರೆಯಲ್ಲಿದ್ದ ಅಫ್ರೀಝಾ ಇದೀಗ ತನ್ನ ಹುಟ್ಟುಹಬ್ಬದ ದಿನದಂದೇ ನಿಧನಹೊಂದಿದ್ದಾಳೆ.
ತನ್ನ ಹುಟ್ಟುಹಬ್ಬದ ದಿನವಾದ ನಿನ್ನೆ , ನನ್ನ ಅಣ್ಣ ಸಂಜೆ ಕೇಕ್ ತರುತ್ತಾನೆ ನೀವೆಲ್ಲರೂ ಮನೆಗೆ ಬರಬೇಕೆಂದು ಊರವರನ್ನೆಲ್ಲ ಆಹ್ವಾನಿಸಿದ್ದಳು. ಆದರೆ ಸಂಜೆ ಹೊತ್ತಿಗೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಈ ಕುಟುಂಬದ ಕಣ್ಣೀರಿನ ಕಥೆ:
ಅಪ್ಪ ಬಿಟ್ಟುಹೋದ ನಂತರ ತಾಯಿಯ ಆರೈಕೆಯಲ್ಲಿದ್ದ ಇಬ್ಬರು ಹೆಣ್ಣು ಒಬ್ಬ ಗಂಡು ಮಕ್ಕಳು, ನಂತರ ಅನಾರೋಗ್ಯದಿಂದ ತಾಯಿಯನ್ನೂ ಕಳೆದುಕೊಂಡರು. ತಾಯಿ ಅಗಲಿ ವರ್ಷ ತುಂಬುವುದರೊಳಗೆ ಕುಟುಂಬಿಕರ ಆಸರೆಯಲ್ಲಿದ್ದ ಸಹೋದರಿ ಅಗಲಿದಳು. ಇದೀಗ ಕೆಲವೇ ವರ್ಷಗಳ ನಂತರ ಅಫ್ರಿಝಾ ಮೃತಪಟ್ಟಿದ್ದಾಳೆ.
ತಂದೆ-ತಾಯಿಯ ನಂತರ ತನಗೆ ಆಸರೆಯಾಗಿದ್ದ ತನ್ನ ಎರಡು ಸಹೋದರಿಯರನ್ನೂ ಕಳೆದುಕೊಂಡು ಅಯಾಝ್ ಎಂಬ ಸಹೋದರ ಏಕಾಂಗಿಯಾದ್ದಾನೆ.