dtvkannada

ಉಪ್ಪಿನಂಗಡಿ: ಯುವಕನನ್ನು ತಂಡವೊಂದು ಅಡ್ಡಗಟ್ಟಿ ಆತನ ತಮ್ಮನನ್ನೂ ಕರೆಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಸಮೀಪದ ಇಳಂತಿಲ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ 10:30 ರ ಹೊತ್ತಿಗೆ ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿದ್ದ ಮಂಜುನಾಥ್ ರವರ ಬೈಕನ್ನು ಇಳಂತಿಲ ಎಂಬಲ್ಲಿ ಪರಿಚಯಸ್ಥ ಯುವಕರು ಅಡಗಟ್ಟಿ ನಿಲ್ಲಿಸಿದ್ದು ಅಪರಿಚಿತ ನಾಲ್ಕು ಮಂದಿ ಸೇರಿ ಮಂಜುನಾಥ್ ರವರ ಮೇಲೆ ದೊಣ್ಣೆ ಮತ್ತು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಘಟನೆ ಸ್ಥಳಕ್ಕೆ ಮಂಜುನಾಥ್ ನ ತಮ್ಮನನ್ನೂ ಕರೆಸಿದ್ದು ಅವನ ಮೇಲೆಯೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಗಾಯಾಳುಗಳು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.
ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

By dtv

Leave a Reply

Your email address will not be published. Required fields are marked *

error: Content is protected !!