ಪುತ್ತೂರು: ಕರೆಂಟ್ ಶಾಕ್ ಹೊಡದು 6 ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕೈಯಲ್ತಡ್ಕ ಎಂಬಲ್ಲಿ ನಡೆದಿದೆ.
ಮೃತ ಮಗುವನ್ನು ಕುಂಬ್ರ ಸಮೀಪದ ಸನ್ಯಾಸಿಗುಡ್ಡೆ ನಿವಾಸಿ ಹೈದರ್ ಆಲಿ ಹಾಗೂ ಅಪ್ಸ ದಂಪತಿಗಳ ಪುತ್ರ ಮಹಮ್ಮದ್ ಆದಿಲ್(೬) ಎಂದು ತಿಳಿದು ಬಂದಿದೆ.
ತನ್ನ ತಾಯಿಯ ಜೊತೆ ಬೆಳ್ಳಾರೆಯ ಅಜ್ಜಿ ಮನೆಗೆ ಹೋಗಿದ್ದ ಆದಿಲ್, ಆಟವಾಡುತ್ತಿದ್ದ ಸಂದರ್ಭ ಹಳೆಯದಾದ ಫ್ರಿಡ್ಜ್ ಮುಟ್ಟಿದ್ದಾನೆ. ಆಗ ಕರೆಂಟ್ ಶಾಕ್ ಹೊಡೆದು ನೆಲಕ್ಕೆ ಬಿದ್ದಿದ್ದಾನೆ.
ಕೂಡಲೇ ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಗು ಅದಾಗಲೇ ಮೃತಪಟ್ಟಿರುವುದಾಗಿ ಡಾಕ್ಟರ್ ತಿಳಿಸಿದ್ದಾರೆ.
ಬಾಲಕನ ತಂದೆ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.