dtvkannada

ಮಂಗಳೂರು: ಜಾತ್ಯಾತೀತ ದೇಶವಾದ ಭಾರತದ ಸರ್ವಧರ್ಮೀಯರೂ ಆಶಾಕೇಂದ್ರವಾಗಿ ಕಾಣುವ ಸ್ಥಳ ಮಹಾ ಆಧ್ಯಾತ್ಮಿಕ ಕೇಂದ್ರ ಹಾಗೂ ಹಲವಾರು ಸಮಸ್ಯೆಗಳಿಗೆ ಪರಿಹಾರ ಕೇಂದ್ರವಾದ ಸುಪ್ರಸಿದ್ಧ ತಾಣವಾಗಿದೆ ಅಜ್ಮೀರ್ ದರ್ಗಾ ಶರೀಫ್ ಆಗಿದೆ.

ಈ ಪ್ರಖ್ಯಾತ ಅಜ್ಮೀರ್ ದರ್ಗಾದ ಈಗಿನ ಖಲೀಫರು ಹಾಗೂ ಸುಲ್ತಾನುಲ್ ಹಿಂದ್ ಖ್ವಾಜಾ ಮುಈನುದ್ದೀನ್ ಜಿಶ್ತಿ ( ರ) ರವರ ಪರಂಪರೆಯ 26 ನೇ ಪೌತ್ರರೂ ಆಗಿರುವ ಸಯ್ಯಿದ್ ಹಮ್ಮಾದುಲ್ ಹಸನ್ ಜಿಶ್ತಿ ಅಜ್ಮೀರ್ ಇವರು ದ.ಕ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಆಗಮಿಸಲಿದ್ದಾರೆ.

ಇದರ ಅಂಗವಾಗಿ ಮಂಗಳೂರಿನ ಹರೇಕಳದ ಗ್ರಾಮದ ದೇರಿಕಟ್ಟೆ ತ್ವೈಬ ಮದೀನ ಕ್ಯಾಂಪಸ್ ನಲ್ಲಿ ಇಂದು ರಾತ್ರಿ 7 ಗಂಟೆಗೆ ಸರಿಯಾಗಿ ಬೃಹತ್ ಅಜ್ಮೀರ್ ಮೌಲಿದ್, ಕವಾಲಿ ಹಾಗೂ ಜಿಶ್ತಿ ಸಯ್ಯಿದರ ವಿಶೇಷ ದುಆ ಮಜ್ಲಿಸ್ ಗಳು ನಡೆಯಲಿದೆ.ಮಹಾ ಕುಟುಂಬದ ಸಯ್ಯಿದರೂ ಸೂಫೀವರ್ಯರೂ ಆಲಿಮರೂ ಆಗಿರುವ ಜಿಶ್ತಿ ಸಯ್ಯಿದರ ಪುಣ್ಯ ಕಾರ್ಯಕ್ರಮಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ , ಜಿಶ್ತಿ ಸಯ್ಯಿದರನ್ನು ನಮ್ಮ ನಾಡಿಗೆ ಸ್ವಾಗತಿಸಿ,ವಿಜಯಗೊಳಿಸಬೇಕಾಗಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಮಿದ್ ಸಅದಿ ಮಜೀರ್ಪಳ್ಳ ಉಸ್ತಾದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!