dtvkannada

ವಿಟ್ಲ: ಹಂದಿ ಹಿಡಿಯಲೆಂದು ಗದ್ದೆಯಲ್ಲಿ ಅಳವಡಿಸಿದ್ದ ವಿದ್ಯುತ್ ಉಪಕರಣವನ್ನು ತುಳಿದು ಕರೆಂಟ್ ಶಾಕ್ ಗೆ ಬಾಲಕನೊರ್ವ ಮೃತಪಟ್ಟ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದ ಸಾಯ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.

ಘಟನೆಯಲ್ಲಿ ಮೃತಪಟ್ಟ ಬಾಲಕನನ್ನು ಸಾಯ ನಿವಾಸಿ ನಾರಾಯಣ ನಾಯ್ಕ್ ರವರ ಪುತ್ರ ಜಿತೇಶ್(17) ಎಂದು ಗುರುತಿಸಲಾಗಿದೆ.

ಹಂದಿ ಹಿಡಿಯಲೆಂದು ಅಕ್ರಮವಾಗಿ ಗದ್ದೆಗೆ ವಿದ್ಯುತ್ ಅಳವಡಿಸಿರುವುದೇ ಈ ದುರ್ಘಟನೆಗೆ ಕಾರಣವೆಂದು ತಿಳಿದು ಬಂದಿದೆ.

ಅಕ್ರಮ ವಿದ್ಯುತ್ ಉಪಕರಣ ಬಳಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇನ್ನು ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!