dtvkannada

ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ಒಪ್ಪಿಗೆ ನೀಡಿಲ್ಲ ಎಂದು ಆರೋಪಿಸಿ ಹೆಣ್ಣಿನ ತಂದೆ ಸಹಿತ ಮನೆಯವರ ಮೇಲೆ ಯುವಕನೊರ್ವನ ತಂಡ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಸಮೀಪದ ಬಿಳಿಯೂರಿನ ಅಯೋಧ್ಯ ನಗರ ಎಂಬಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಬಿಳಿಯೂರಿನ ಉಸ್ಮಾನ್ ಬ್ಯಾರಿ ಎಂಬವರು ತನ್ನ ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ನಿಝಾಮುದ್ದೀನ್ (25) ಎಂಬಾತ ತೌಫಿಕ್ (20) ಅಬ್ದುಲ್ ಸಲೀಮ್(23) ಹಾಗು ಮುಹಮ್ಮದ್ ಶಫೀಕ್(22) ನಾಸಿರ್ ಮತ್ತು ಸಮೀರ್ ಎಂಬ ಯುವಕರ ತಂಡದೊಂದಿಗೆ ಉಸ್ಮಾನ್ ರವರ ಮನೆಗೆ ತೆರಳಿ ಉಸ್ಮಾನ್ ಮತ್ತು ಅವರ ತಮ್ಮ ನ ಮೇಲೆ ಹಲ್ಲೆ ನಡೆಸಿ ಮಾರಕಾಯುಧಗಳಿಂದ ಕೊಲೆ ನಡೆಸಲು ಯತ್ನಿಸಿದ್ದಾರೆ ಎಂಬ ಆರೋಪದಡಿ ಉಸ್ಮಾನ್ ರವರ ಪತ್ನಿ ತಾಹಿರಾ ರವರು ನೀಡಿದ ದೂರಿನಂತೆ ನಾಲ್ವರನ್ನು ಬಂಧಿಸಿದ್ದಾರೆ.ಇನ್ನೂ ಇಬ್ಬರು ತಪ್ಪಿಸಿಕೊಂಡಿದ್ದು ಅವರ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.

ಕಳೆದ ಶುಕ್ರವಾರ ರಾತ್ರಿ 11:15ರ ವೇಳೆಗೆ ಆರೋಪಿಗಳಾದ ಮುಹಮ್ಮದ್ ನಿಝಾಮುದ್ದೀನ್, ತೌಫೀಕ್, ಮತ್ತು ಅಬ್ದುಲ್ ಸಲೀಂ ಹಾಗೂ ಮಹಮ್ಮದ್ ಶಫೀಕ್, ನಾಸಿರ್ ಮತ್ತು ಸಮೀರ್ ಎಂಬವರನ್ನು ಒಳಗೊಂಡ ತಂಡ ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿದೆ. ಮನೆಯಲ್ಲಿದ್ದ ತನ್ನ ಪತಿ ಉಸ್ಮಾನ್ ಬ್ಯಾರಿ ಮತ್ತು ಮಕ್ಕಳನ್ನು ಅವ್ಯಾಚ ಪದಗಳಿಂದ ನಿಂದಿಸಿದ್ದಾರೆ.
ಆ ವೇಳೆ ತನ್ನ ಮನೆಗೆ ಆಗಮಿಸಿದ ತನ್ನ ಮೈದುನ ಯೂಸುಫ್ ಮೇಲೆ ಯುವಕರ ತಂಡ ಹಲ್ಲೆ ನಡೆಸಿದ್ದಾರೆ.
ಬಿಡಿಸಲು ಹೋದ ಉಸ್ಮಾನ್ ರವರಿಗೆ ನಿಝಾಮುದ್ದೀನ್ ಚೂರಿಯಿಂದ ಎದೆಗೆ ತಿವಿದಿದ್ದಾನೆ. ಹಾಗು
ಅಲ್ಲದೆ ತಂಡವು ದೊಣ್ಣೆ, ಕಲ್ಲು, ಕೈಗಳಿಂದ ಹೊಡೆದು ಜೀವ ಬೆದರಿಕೆಯೊಡ್ಡಿದೆ ಎಂದು ತಾಹಿರಾ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಉಸ್ಮಾನ್ ಬ್ಯಾರಿಯವರ ಮಗಳನ್ನು ತನಗೆ ವಿವಾಹ ಮಾಡಿಕೊಡಬೇಕೆಬ ನಿಝಾಮುದ್ದೀನ್ ನ ಕೋರಿಕೆಯನ್ನು ನಿರಾಕರಿಸಿದ ಕಾರಣಕ್ಕೆ ಆತ ತಂಡವೊಂದನ್ನು ಕಟ್ಟಿಕೊಂಡು ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!