dtvkannada

'; } else { echo "Sorry! You are Blocked from seeing the Ads"; } ?>

ಕಾಸರಗೋಡು: ಏರ್ವಾಡಿ,ಮುತ್ತುಪೇಟೆಗೆ ಮಕ್ಬರ ಝಿಯಾರತ್ತಿಗೆ ತೆರಳಿದ್ದ ಕಾಸರಗೋಡಿನ ವಿದ್ಯಾರ್ಥಿ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.

ಘಟನೆಯಲ್ಲಿ ಮೃತಪಟ್ಟ ಯುವಕನು ತಮಿಳುನಾಡಿನ ಏರ್ವಾಡಿಗೆ ತೆರಳಿದ್ದು ಈತನು ಪೈವಳಿಕೆಯ ದೇವಕ್ಕಾನದ ಮುಹಮ್ಮದ್ ಹನೀಫ್ ಹಾಜಿ ಎಂಬವರ ಪುತ್ರ ವಿದ್ಯಾರ್ಥಿ ಅನ್ಸಾಫ್ (18) ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ಅನ್ಸಾಫ್ ಏರ್ವಾಡಿ ಮುತ್ತುಪೇಟೆ ಮಕ್ಬರ ಬಳಿ ಇರುವ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ವಿದ್ಯಾರ್ಥಿ ಅನ್ಸಾಫ್ ಸೇರಿದಂತೆ ಸುಮಾರು 50 ವಿಧ್ಯಾರ್ಥಿಗಳು ಮೂರು ದಿನಗಳ ಹಿಂದೆ ತಮಿಳುನಾಡಿನ ವಿವಿಧ ಸ್ಥಳಗಳಲ್ಲಿರುವ ಹಲವು ಮಕ್ಬರಗಳ ಝಿಯಾರತ್ ಗಾಗಿ ತೆರಳಿದ್ದು ಗುರುವಾರ ಬೆಳಗ್ಗೆ ಇತರ ವಿದ್ಯಾರ್ಥಿಗಳ ಜೊತೆ ಕೆರೆಯಲ್ಲಿ ಸ್ನಾನಕ್ಕಿಳಿದಾಗ ಈ ಅವಘಡ ಸಂಭವಿಸಿದ್ದು ಇದರಲ್ಲಿ ಅನ್ಸಾಫ್‌ರವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!