dtvkannada

'; } else { echo "Sorry! You are Blocked from seeing the Ads"; } ?>

ಉಡುಪಿ: ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಇರುವ ಭವ್ಯ ಪೆಟ್ರೋಲ್ ಬಂಕ್‌ನ ವಿದ್ಯುತ್ ಕಾಮಗಾರಿ ಸಂದರ್ಭ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ.

ದುರ್ಘಟನೆಯಲ್ಲಿ ಮೃತಪಟ್ಟ ಯುವಕ ಲಿಂಗರಾಜ್ (೧೯) ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ಪೆಟ್ರೋಲ್ ಬಂಕ್‌ನ ಅರ್ಥಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಪಿಕ್ಕಾಸಿನಿಂದ ಅಗೆಯುತ್ತಿದ್ದ ಸಂದರ್ಭ ಶಾಕ್ ತಗುಲಿದೆಯೆಂದು ವರದಿಯಾಗಿದೆ.

ಗುತ್ತಿಗೆ ಕಾಮಗಾರಿಗೆ ಲಿಂಗರಾಜು, ಮಂಗಳಪ್ಪ, ಎಲ್ಲಪ್ಪ ಹಾಗೂ ಕಿರಣ್ ಅವರು ಬಂದಿದ್ದು, ಲಿಂಗರಾಜು ಶಾಕ್ ತಗುಲಿ ಮೃತಪಟ್ಟರೆ, ಮಂಗಳಪ್ಪ ನವರಿಗೂ ಶಾಕ್ ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ಕಾಪು ವೃತ್ತ ನಿರೀಕ್ಷಕ ಕೆ ಸಿ ಪೂವಯ್ಯ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!