';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಜೈಲ್ ನಿಂದ ಬೇಲ್ ಸಿಕ್ಕಿ ಹೊರ ಬರುತ್ತಿದ್ದ ಕೊಲೆ ಆರೋಪಿ ಸುಹಾಸ್ ಶೆಟ್ಟಿಯವರನ್ನು ತಲವಾರುವಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇದೀಗ ಬಜ್ಪೆಯಲ್ಲಿ ಸಂಭವಿಸಿದೆ.
ಮಂಗಳೂರುನ ಫಾಝಿಲ್ ಕೊಲೆ ಆರೋಪಿ ಸುಹಾಸ್ ಶೆಟ್ಟಿ ಬಜ್ಪೆಯವರನ್ನು ಬಜ್ಪೆ ಬಳಿ ಮೀನಿನ ಪಿಕ್ ಅಪ್ ನಲ್ಲಿ ಅಡ್ಡಗಟ್ಟಿದ ತಂಡವೊಂದು ಮಚ್ಚುವಿನಿಂದ ತೀವ್ರವಾದ ಹಲ್ಲೆ ನಡೆಸಿದ್ದು ಗಂಭೀರಗಾಯಗೊಂಡಿದ್ದ ಸುಹಾಸ್ ರವರು ಸ್ಥಳದಲ್ಲೇ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಕೊಲೆಗೆ ಕುಟುಂಬ ಕಲಹವೇ ಕಾರಣ ಎಂದು ಕೆಲವು ಮೆಸೇಜ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಕೆಲವೊಂದು ಕಡೆ ಫಾಝಿಲ್ ಹತ್ಯೆಯ ಪ್ರತಿಕಾರ ಎಂದು ಕೂಡ ಹರಿದಾಡುತ್ತಿದೆ. ನೈಜ ಕಾರಣಗಳು ಪೋಲೀಸರ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಅವರ ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ರೌಡಿ ಶೀಟರ್ ಕೊಲೆ ಆರೋಪಿ ಸುಹಾಸ್ ಶೆಟ್ಟಿ ರವರ ಹತ್ಯೆಗೆ ಸ್ವಧರ್ಮಿಯರೇ ಸ್ಕೆಚ್ ಹಾಕಿದ್ದಾರೆ ಎನ್ನುವ ಮಾಹಿತಿ ಬರುತ್ತಿದ್ದು ಕೆಲವು ಕ್ಷಣಗಳಲ್ಲಿ ಕಮಿಷನರ್ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯಿದೆ.ಫಾಝಿಲ್ ಹತ್ಯೆಗೆ ಪ್ರತೀಕಾರ ಈ ಹತ್ಯೆ ನಡೆದಿದೆ ಎಂದು ಕೆಲವು ಹಿಂದೂ ಪರಿಷತ್ ನಾಯಕರು ಮತ್ತು ಬಿಜೆಪಿ ನಾಯಕರು…
ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನಲೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಕಮಿಷನರ್ ಅನುಪಮ ಅಗ್ರವಾಲ್ ಆದೇಶ ಹೊರಡಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದಿನಿಂದ (ಮೇ 2) ಮೇ 6 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಇನ್ನು ಕೊಲೆ ಆರೋಪಿ ಸುಹಾಸ್ ರವರ ಮೃತದೇಹವನ್ನು ಏ.ಜೆ ಆಸ್ಪತ್ರೆಯಿಂದ ಬಂಟ್ವಾಳಕ್ಕೆ ಮೆರೆವಣೆಗೆ ಮೂಲಕ ಕರೆ ತರಲಾಗುವುದುಎಂದು ತಿಳಿದು ಬಂದಿದೆ. ಹಿಂದೂ ಮುಖಂಡರು ಈಗಾಗಲೇ ದ.ಕ ಜಿಲ್ಲಾ…
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಇಂದು ಮುಂಜಾನೆ ಮುಸ್ಲಿಂ ಯುವಕನಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದ ಘಟನೆ ಮಂಗಳೂರು ಹೊರ ವಲಯದ ಅಡ್ಯಾರ್ ಕಣ್ಣೂರಿನಲ್ಲಿ ಸಂಭವಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಅಡ್ಯಾರ್ ಕಣ್ಣೂರ್ ನಿವಾಸಿ ನೌಷಾದ್ ಎಂದು ಗುರುತಿಸಲಾಗಿದೆ. ಕೆಲಸಕೆಂದು ಮುಂಜಾನೆ ಮೂರು ಗಂಟೆ ಹೊತ್ತಿಗೆ ಕಲ್ಲಾಪು ಮಾರ್ಕೆಟ್ ಗೆ ತೆರಳಲು ಹೆದ್ದಾರಿ ಬದಿ ವಾಹನಕ್ಕೆ ಕಾಯುತ್ತಿದ್ದ ನೌಷಾದ್ ರವರ ಮೇಲೆ ದ್ವಿಚಕ್ರ ದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ…