dtvkannada

ಬಂಟ್ವಾಳ: ಪವಿತ್ರ ಮೆಕ್ಕಾಗೆ ಉಮ್ರಾ ಯಾತ್ರೆಗೆ ತೆರಳಿದ ಭಾರತದ ನಿವಾಸಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಉಸ್ಮಾನ್ (67) ಎಂದು ಗುರುತಿಸಲಾಗಿದೆ.

ತಿಂಗಳ ಹಿಂದೆ ಪವಿತ್ರ ಉಮ್ರಾ ಯಾತ್ರೆಗೆಂದು ಹೊರಟ ಉಸ್ಮಾನ್ ರವರಿಗೆ ಮಕ್ಕಾ ದಲ್ಲಿ ಉಮ್ರಾಗೈಯುವ ವೇಳೆ ಹೃದಯಾಘಾತ ಉಂಟಾಗಿದ್ದು ಅದೇ ವೇಳೆ ಗಲ್ಫ್ ಟೂರ್ಸ್ ಅಮೀರ್ ಸಿರಾಜುದ್ದೀನ್ ಫೈಝಿ ಹಾಗೂ ಶಾಕಿರ್ ಹಕ್ ನೆಲ್ಯಾಡಿ ರವರ ಸಹಾಯದಿಂದ ಹತ್ತಿರದ ಕಿಂಗ್ ಫೈಸಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು

ಕಳೆದ ಒಂದು ತಿಂಗಳಿಂದ ತೀವ್ರ ನಿಗಾ ಘಟಕದಲ್ಲಿದ್ದ ಉಸ್ಮಾನ್ ರವರು ನಿನ್ನೆ ರಾತ್ರಿ ವೇಳೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಇನ್ನೂ ಅಂತಿಮ ವಿಧಿ ವಿಧಾನಗಳು ಅಂತ್ಯಕ್ರಿಯೆ ಪವಿತ್ರ ಮಕ್ಕಾದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!