ಪುತ್ತೂರು: ವಿಧಾನ ಸಭೆ ಚುಣಾವನೆ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪರ ಪ್ರಚಾರ ಸಭೆ ವಿಟ್ಲ ಬೊಳಂತಿಮೊಗರಿನಲ್ಲಿ ನಡೆಯಿತು.
ಪರ ಪ್ರಚಾರ ಸಭೆಯಲ್ಲಿ ಮಾತನಾಡಿದದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಅಶೋಕ್ ರೈ ಪುತ್ತೂರು ಶಾಸಕರಾದರೆ ಮನೆ ಇಲ್ಲದ ಬಡವರಿಗೆ ಮನೆ ದೊರೆಯುವು ಗ್ಯಾರಂಟಿ ಇದಕ್ಕೆ ನಾನೇ ಜವಾಬ್ದಾರಲು ಎಂದು ಭರವಸೆ ನೀಡಿದರು.
ಆಶ್ರಯ ಯೋಜನೆಯಲ್ಲಿ ಸರಕಾರ ಕೊಡುವ ಮನೆಯನ್ನು ಪುತ್ತೂರಿಗೆ ಹೆಚ್ಚು ತರಲಿದ್ದಾರೆ. ಈಗಾಗಲೇ ಸಾವಿರಾರು ಬಡ ಕುಟುಂಬಗಳು ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಬಡವರಿಗೆ ಮನೆ ಕೊಟ್ಟಿಲ್ಲ. ಬಿಜೆಪಿ ಸರಕಾರ ಬಸವ ವಸತಿ ಸೇರಿದಂತೆ ಎಲ್ಲಾ ವಸತಿ ಯೋಜನೆಯನ್ನು ಮೂಲೆಗುಂಪು ಮಾಡಿದೆ.
ಬಡವರಿಗೆ ಮನೆ ಕೊಡುವ ಬಸವ ವಸತಿ ಯೋಜನೆ ಜಾರಿಗೆ ಮಾಡಿದ್ದು ಸಿದ್ದರಾಮಯ್ಯ ಸರಕಾರ.
ನಾನು ಶಾಸಕಳಾಗಿದ್ದ ವೇಳೆ 1000 ಕ್ಕೂ ಮಿಕ್ಕಿ ಮನೆ ಕೊಡಲಾಗಿತ್ತು. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು ಅಶೋಕ್ ರೈ ಶಾಸಕರಾಗಿದ್ದಲ್ಲಿ ಪುತ್ತೂರು ಜನತೆಯ ಎಲ್ಲಾ ಬೇಡಿಕೆಗಳು ಈಡೇರಲಿದೆ.
ಪ್ರತೀಯೊಬ್ಬರೂ ತಪ್ಪದೇ ಕಾಂಗ್ರೆಸ್ ಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಅಭ್ಯರ್ಥಿ ಅಶೋಕ್ ರೈ , ಮುಖಂಡರಾದ ಡಾ.ರಾಜಾರಾಂ ಕೆ ಬಿ, ಮಹೇಶ್ ರೈ ಅಂಕೊತ್ತಿಮಾರ್, ಎಂ ಎಸ್ ಮಹಮ್ಮದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.