ಸುಳ್ಯ: ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆ ಶಾಲೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಮಾಸಿಕ ಸಭೆ ದಿನಾಂಕ 4/6/2023 ರಂದು ನಡೆಯಿತು ಈ ಕಾರ್ಯಕ್ರಮವನ್ನು ನಿವೃತ್ತ ಮಾಜಿ ಸೈನಿಕರಾದ ಕಮಲಾಕ್ಷಯವರು ಉದ್ಘಾಟನೆ ಮಾಡಿ ಮಾತನಾಡಿದರು.

ನಂತರ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ನಂತರ 20 ಬಡ ಮಕ್ಕಳಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಪುಸ್ತಕ ವಿತರಣೆ ಮಾಡಲಾಯಿತು.
ಪುಸ್ತಕ ವಿತರಣೆಯನ್ನು ನಿವೃತ್ತ ಮಾಜಿ ಸೈನಿಕ ಕಮಲಾಕ್ಷ ಅಡ್ತಲೆಯವರು ನೆರವೇರಿಸಿದರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ಕೊಡಗು ಜಿಲ್ಲಾಧ್ಯಕ್ಷರಾದ ಉಣ್ಣೈಸ್ ಪೆರಾಜೆ ಸಂಘಟನೆಯ ಕುರಿತು ಮಾತನಾಡಿದರು ನಂತರ 40 ವರ್ಷಗಳಿಂದ ಅರಮನೆ ಗಾಯ ಎಂಬಲ್ಲಿ ಸೇತುವೆ ಇಲ್ಲದೆ ನಮಗೊಂದು ಸೇತುವೆ ನಿರ್ಮಿಸಿ ಕೊಡಿ ಎಂದು ಶಾಸಕರಾದ ಎಸ್ ಅಂಗಾರವರಿಗೆ 40 ವರ್ಷಗಳಿಂದ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಆದಕಾರಣ ಈಗಿನ ಶಾಸಕರಾದ ಭಾಗೀರಥಿ ಮುರುಳ್ಯ ಇವರಿಗೆ ಸಂಘಟನೆ ವತಿಯಿಂದ ಅರಮನೆ ಗಾಯಕ್ಕೆ ಸೇತುವೆ ನಿರ್ಮಿಸಿ ಕೊಡಬೇಕೆಂದು ಮನವಿ ಕೊಡೋಣ ಎಂದು ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಹೇಳಿದರು.







ಅಧ್ಯಕ್ಷತೆಯನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ವಹಿಸಿಕೊಂಡರು ಮುಖ್ಯ ಅತಿಥಿಯಾಗಿ ನಿವೃತ್ತ ಮಾಜಿ ಸೈನಿಕ ಕಮಲಾಕ್ಷ ಅಡ್ತಲೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಕೊಡಗು ಜಿಲ್ಲಾ ಅಧ್ಯಕ್ಷರು ಉಣ್ಣೈಸ್ ಪೆರಾಜೆ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಕಾರ್ಯದರ್ಶಿಯಾದ ತೇಜಕುಮಾರ್ ಅವರು ಸ್ವಾಗತಿಸಿ ವಂದಿಸಿದರು.ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ನಿವೃತ್ತ ಮಾಜಿ ಸೈನಿಕ ಕಮಲಾಕ್ಷ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಕೊಡಗು ಜಿಲ್ಲಾಧ್ಯಕ್ಷರು ಉಣ್ಣೈಸ್ ಪೆರಾಜೆ ಸುಳ್ಯ ತಾಲೂಕು ಅಧ್ಯಕ್ಷರು ರಮೇಶ್ ಕೊಡೆಂಕಿರಿ ಕಾರ್ಯದರ್ಶಿ ತೇಜಕುಮಾರ್ ಅರಂತೋಡು ಘಟಕದ ಅಧ್ಯಕ್ಷರು ನವೀನ್ ಕಲ್ಲುಗುಡ್ಡೆ ಕಾರ್ಯದರ್ಶಿ ರಾಧಾಕೃಷ್ಣ ಅರಮನೆ ಗಾಯ ಮಹಿಳಾ ಅಧ್ಯಕ್ಷರು ಯಶೋದ ಅರಮನೆ ಗಾಯ ಇವರೆಲ್ಲರೂ ಉಪಸ್ಥಿತರಿದ್ದರು ಮತ್ತು ಅಂಬೇಡ್ಕರ್ ರಕ್ಷಣಾ ವೇದಿಕೆಯ ಎಲ್ಲಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.