ಪುತ್ತೂರು: ಕಬಕದ ಪೋಳ್ಯ ಮಸೀದಿಯ ಟರ್ನ್ ಬಳಿ ಖಾಸಗಿ ಬಸ್ ಮತ್ತು ಆಕ್ಟೀವಾ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಒರ್ವ ಸ್ಥಳದಲ್ಲೇ ದಾರುಣ ಮೃತಪಟ್ಟು ಮತ್ತೋರ್ವನಿಗೆ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ.
![](https://dtvkannada.in/wp-content/uploads/2024/02/IMG-20240225-WA0146-1024x1017.jpg)
ಬಸ್ಸು ಮತ್ತು ಆಕ್ಟೀವಾ ನಡೆದ ಅಪಘಾತದಲ್ಲಿ ಓರ್ವನ ತಲೆ ಬಸ್ಸಿಗೆ ಬಡಿದಿದ್ದು ರಕ್ತವು ಬಸ್ಸಿನ ಬಾಡಿಯಲ್ಲಿ ಅಂಟಿಕೊಂಡಿದ್ದು ಕಂಡು ಬಂದಿದೆ.
ಪೊಳ್ಯ ಮಸೀದಿ ಬಳಿ ಇರುವ ಟರ್ನಿನಲ್ಲಿ ಈ ಅಪಘಾತ ಸಂಭವಿಸಿದ್ದು ನಿನ್ನೆಯೂ ಇದೇ ಭಾಗದಲ್ಲಿ ಅಪಘಾತ ಸಂಭವಿಸಿದ್ದು ಒಂದು ಮೊನ್ನೆ ಒಂದು ಜೀವವನ್ನು ಬಲಿ ಪಡೆದುಕೊಂಡಿತ್ತು.
ಕಳೆದ ಒಂದು ವಾರದಿಂದಿಚೆ ಈ ಭಾಗದಲ್ಲಿ ಭೀಕರ ಅಪಘಾತ ಸಂಭವಿಸುತ್ತಿದ್ದು ಪುತ್ತೂರು ತಾಲೂಕಿನ ಭಾಗದಲ್ಲಿ ಕಳೆದ ಒಂದು ವಾರದಿಂದ ಹಲವು ಅಪಘಾತ ಸಂಭವಿಸಿದ್ದು ಯುವಕರು ಅತಿಯಾಗಿ ಬಲಿಯಾಗುತ್ತಿರುವುದು ಖೇದಕರ.
ಈ ಬಗ್ಗೆ ಸಂಬಂಧಪಟ್ಟವರು ಎಚ್ಚರವಹಿಸಿ ಕೊಂಡರೆ ಉತ್ತಮ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ಧಾರೆ.