dtvkannada

ಮೈಸೂರು: ನಗರದಲ್ಲಿ ಸರಗಳ್ಳತನ ಮುಂದುವರಿದಿದ್ದು, ಮಫ್ತಿಯಲ್ಲಿದ್ದ ಹೆಡ್ ಕಾನ್‍ಸ್ಟೇಬಲ್ ಸರ ಕದ್ದು ಪರಾರಿಯಾಗಿರುವ ಘಟನೆ ಸಂತ ಫಿಲೋಮಿನಾ ಚರ್ಚ್ ಬಳಿ ಗುರುವಾರ ರಾತ್ರಿ ನಡೆದಿದೆ.

ಪರಾರಿಯಾದ ಕಳ್ಳರನ್ನು ಸಾರ್ವಜನಿಕರು ಚಿನ್ನದ ಸರದ ಸಮೇತ ಹಿಡಿದಿದ್ದಾರೆ. ಇಲಿಯಾಸ್ ಸರ ಕಳೆದುಕೊಂಡ ಪೇದೆ. 32 ಗ್ರಾಂ. ಚಿನ್ನದ ಸರ ಕಸಿದ ಕಳ್ಳರು, ನಂತರ ಓಡಲಾಗದೆ ಮಿಲಾದ್ ಪಾರ್ಕ್‍ನಲ್ಲಿ ಇಬ್ಬರು ಕಳ್ಳರು ಅಡಗಿದ್ದರು.

ಸಾರ್ವಜನಿಕರು ಇಬ್ಬರನ್ನೂ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!