dtvkannada

ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ನಾಯಕನ ಬಂಧನ ಖಂಡಿಸಿ ನಡೆದ ಪ್ರತಿಭಟನೆ ಮತ್ತು ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಬಂಧಿಸಲು, ಬೆಳ್ತಂಗಡಿ ಪೊಲೀಸರು ಇಂದು ಬೆಳಗ್ಗಿನಿಂದ ಪೂಂಜಾ ಮನೆಯೆದುರು ನಾಕಾಬಂಧಿ ಹಾಕಿದ್ದರು.

ಆದರೆ ಬಂಧನ ವಿರೋಧಿಸಿ ಪೂಂಜಾ ಮನೆಯೆದುರು ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದು, ಪೂಂಜಾ ಪಡೆ ಪೊಲೀಸರಿಗೆ ಸವಾಲೆಸೆದಿದೆ.

ಮಧ್ಯಾಹ್ನ ವಕೀಲರು ತಂಡ ಭೇಟಿ ನೀಡಿ, ನೋಟಿಸ್ ನೀಡದೆ ಬಂಧಿಸುವುದರ ವಿರುದ್ಧ ಪೊಲೀಸರೊಂದಿಗೆ ಮಾತುಕತೆ ನಡೆಸಿತ್ತು. ಸಂಜೆ ಹೊತ್ತಿಗೆ ಅಲರ್ಟ್ ಆದ ಪೊಲೀಸರು ನೋಟಿಸ್ ನೀಡಿ ಮತ್ತೆ ಬಂಧನಕ್ಕೆ ಮುಂದಾಗಿದ್ದರು. ಇದೀಗ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದು, ಪೂಂಜಾ ಮನೆಯೆದುರು ಹೈಡ್ರಾಮ ಸೃಷ್ಟಿಯಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!