ಉಪ್ಪಿನಂಗಡಿ: ಸಾಮರಸ್ಯದ ಬಾಷಣ ಮಾಡಬೇಕಾದ ಶಾಸಕ ಹರೀಶ್ ಪೂಂಜಾ ರವರು ಕೋಮು ವೈಷಮ್ಯದ ಬಾಷಣ ಬಿಗಿದದ್ದು ಅಕ್ಷಮ್ಯ ತಕ್ಷಣವೇ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು SSF ಸರಳಿಕಟ್ಟೆ ಸೆಕ್ಟರ್ ಸಮಿತಿ ಅಗ್ರಹಿಸಿದೆ.

ಡಿ ಟಿವಿ ಕನ್ನಡದ ಜೊತೆಗೆ ಮಾತನಾಡಿದ ಸುನ್ನೀ ಸ್ಟೂಡೆಂಟ್ ಫೆಡರೇಷನ್ SSF ಸರಳಿಕಟ್ಟೆ ಸೆಕ್ಟರ್ ನಾಯಕರು ತೆಕ್ಕಾರಿನ ಸಾಮರಸ್ಯಕ್ಕೆ ಕೊಳ್ಳಿಯಿಡುವ ಶಾಸಕ ಹರೀಶ್ ಪೂಂಜಾರವರ ಪ್ರಚೋದನಕಾರಿ ಭಾಷಣ ಖಂಡನೀಯ.
ಶಾಂತಿ ಸೌಹಾರ್ದತೆಯ ಊರಿಗೆ ದ್ವೇಷದ ಜ್ವಾಲೆಯನ್ನು ಹೊತ್ತಿಸಿ ಹೋಗಿದ್ದಾರೆ ಎಂದು ಆರೋಪಿಸಿದರು.
ದೇವಸ್ಥಾನದ ಕಾರ್ಯಕ್ರಮಕ್ಕೆ ಜಾಗ ನೀರು ಪಾರ್ಕಿಂಗ್ ಗೆ ಜಾಗ ಎಲ್ಲವನ್ನೂ ಸ್ಥಳೀಯ ಮುಸಲ್ಮಾನರೇ ನೀಡಿದ್ದು ಅಷ್ಟೊಂದು ಸೌಹಾರ್ದತೆಯ ಊರಿನಲ್ಲಿ ಶಾಸಕರ ಭಾಷಣಗಳು ಸಮಾಜದ ಸ್ವಾಸ್ತ್ಯವನ್ನು ಕೆಡುವುದಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಸೆಕ್ಷನ್ ಜಾರಿಯಿರುವಾಗಲೇ ಶಾಸಕ ಎಂಬ ಪದವಿಯಲ್ಲಿರುವವರು ಮಾಡಿದ ಪ್ರಚೋದನಕಾರಿ ಭಾಷಣಕ್ಕೆ ತಕ್ಷಣವೇ ಕಾನೂನು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.