dtvkannada

ಬೆಳ್ಳಾರೆ : ಮುಹಿಯದ್ದೀನ್ ಜುಮಾ ಮಸ್ಜಿದ್ ಚೆನ್ನಾವರ ಇದರ ಮಾಸಿಕ ಮಹ್ಲರತುಲ್ ಬದ್ರಿಯಾ ಸ್ವಲಾತ್ ದುಆ ಮಜಿಲಿಸ್ ದಿನಾಂಕ 11/9/2021 ಶನಿವಾರ ಮಗ್ರಿಬ್ ನಮಾಜಿನ ಬಳಿಕ ಶಾಫಿ ಚೆನ್ನಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ನೇತೃತ್ವವನ್ನು ಸಯ್ಯಿದ್ ಹಾಮಿದ್ ಅನ್ವರ್ ತಂಗಳ್ ಅಲ್ ಅಹ್ದಲ್ ಮುಹಿಮ್ಮಾತ್ತ್ ವಹಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಹಾಫಿಝ್ ನಝೀರ್ ಸಖಾಫಿ ಚೆನ್ನಾರ್ ಅವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಸೀದಿಯ ಮಾಜಿ ಅಧ್ಯಕ್ಷರುಗಳಾದ ಉಸ್ಮಾನ್ ಹಾಜಿ ಚೆನ್ನಾರ್, ಮಾಮು ಹಾಜಿ ಚೆನ್ನಾರ್, ಹನೀಫ್ ಕುಂಡಡ್ಕ (ಇಂದ್ರಾಜೆ ), ಇಸ್ಮಾಯಿಲ್ ಕಾನವು, ಜಮಾಲುದ್ದೀನ್ ಚೆನ್ನಾವರ, ಅಬ್ದುಲ್ ರಹಿಮಾನ್ ಪಾಲ್ತಾಡ್, ಶರೀಫ್ ಕುಂಡಡ್ಕ ಹಾಗೂ ಮೊದಲಾದ ನಾಯಕರು ಉಪಸ್ಥಿತರಿದ್ದರು.ಅಲಿ ಸಖಾಫಿ ಸ್ವಾಗತಿಸಿ ಅಬ್ದುಲ್ ಅಝೀಝ್ ಮುಸ್ಲಿಯಾರ್ ವಂದಿಸಿದರು.

By dtv

Leave a Reply

Your email address will not be published. Required fields are marked *

error: Content is protected !!