dtvkannada

ಮಂಚಿ, ಸೆ.19: SDPI ಮಂಚಿ ಕಟ್ಟೆ ಬೂತ್ ಸಮಿತಿ ಕಾರ್ಯದರ್ಶಿ ಯಾಸಿರ್ ಮಂಚಿ ರವರ ನೇತೃತ್ವದಲ್ಲಿ ಬೃಹತ್ ಶ್ರಮಾದಾನ ಕಾರ್ಯಕ್ರಮ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಚಿ ಕಟ್ಟೆ ಮಸೀದಿ ಮುಂಭಾಗ ದಲ್ಲಿ ನಡೆಯಿತು. ಮಂಚಿಯಿಂದ ಕಲ್ಲಡ್ಕ ಸಂಪರ್ಕಿಸುವ ರಸ್ತೆಯಾದ ಮಂಚಿ ಕಟ್ಟೆ ಮಸೀದಿ ಮುಂಭಾಗದ ರಸ್ತೆ ಮತ್ತು ಪರಿಸರ ಹಾಗೂ ಮಂಚಿ ಕೋಟ್ರಾಸ್ ರಸ್ತೆ ಸುತ್ತಾ ಹುಲ್ಲು ರಸ್ತೆಗೆ ಅಡ್ಡವಾಗಿದ್ದ ಗಿಡಗಳನ್ನು, ಬಲ್ಲೆಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.

ಸ್ವಚ್ಛತೆ ಕಾಯ್ರಕಮ ಆರಂಭಿಸುವ ಮುನ್ನ ಪಕ್ಷದ ಸಮವಸ್ತ್ರ ವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ SDPI ಬಂಟ್ವಾಳ ಕ್ಷೇತ್ರ ಸಮಿತಿ ಕೋಶಾಧಿಕಾರಿ ಫೈಝಲ್ ಮಂಚಿ, SDPI ಮಂಚಿ ಗ್ರಾಮ ಸಮಿತಿ ಅಧ್ಯಕ್ಷ ನವಾಜ್ ಕೋಡಿಬೈಲ್, ಕಾರ್ಯದರ್ಶಿ ಕಬೀರ್ ಮಂಚಿ, SDPI ಮಂಚಿಕಟ್ಟೆ ಸದಸ್ಯರಾದ M D ಮಜೀದ್, ಉಬ್ಬಿ ಮಂಚಿ, ಶಮೀದ್ ಮಂಚಿ ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!