ಪುತ್ತೂರು, ಸೆ.24: ಪ್ರತಿಭಟನಾ ನಿರತ ಅಸ್ಸಾಂ ಜನರ ಮೇಲೆ ಪೋಲಿಸರಿಂದ ಗುಂಡೇಟು, ದೌರ್ಜನ್ಯ ಖಂಡಿಸಿ ಮುಹ್ಯಿದ್ದೀನ್ ಜುಮಾ ಮಸೀದಿ ಸಂಪ್ಯದಲ್ಲಿ ಭಿತ್ತಿ ಪತ್ರ ಹಿಡಿದು ಮೊಅಲ್ಲಾ ನಿವಾಸಿಗಳಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ನಿರತ ಅಸ್ಸಾಂಮಿನ ಗ್ರಾಮೀಣ ಜನರ ಮೇಲೆ ಸರ್ಕಾರಿ ಪ್ರಾಯೋಜಿತವಾಗಿ ಪೋಲಿಸರು ಗುಂಡೇಟು ನಡೆಸಿದ್ದು ಹಲವಾರು ಜನರು ಬಲಿಯಾಗಿದ್ದು ಹಾಗೂ ಕ್ರೂರ ವರ್ತನೆ ನಡೆಸಿ ಹಲ್ಲೆಗೈದಿದ್ದು ಖಂಡನೀಯ ಇದರ ವಿರುದ್ದ ಧ್ವನಿಯಾಗಬೇಕಾದದ್ದು ಸಮುದಾಯದ ಕರ್ತವ್ಯವಾಗಿದೆಯೆಂದು ಸಂಪ್ಯ ಜುಮಾ ಮಸೀದಿ ಖತೀಬರಾದ ಬಹು| ಅಲ್-ಹಾಜಿ ಅಬ್ದುಲ್ ಹಮೀದ್ ದಾರಿಮಿ ಉಸ್ತಾದರು ಹೇಳಿದರು.
ಈ ಸಂದರ್ಭದಲ್ಲಿ ಜಮಾಅತ್ ಕಮೀಟಿಯ ಅಧ್ಯಕ್ಷರು, ಉಪಾದ್ಯಕ್ಷರೂ, ಕಾರ್ಯದರ್ಶಿಗಳು ಜಮಾಅತ್ ಕಮೀಟಿಯ ಸದಸ್ಯರೂ ಹಾಗೂ ಮೊಅಲ್ಲಾ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು.