ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಹಾಗೂ ಪ್ರತಿಭಾನ್ವೇಷಣಾ ಕಾರ್ಯಕ್ರಮ ಪ್ರತಿಭೋತ್ಸವ – ೨೧ ಇದರ ಪುತ್ತೂರು ಸೆಕ್ಟರ್ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು. ಚೆಯರ್ಮ್ಯಾನ್ ಆಗಿ ಸಿನಾನ್ ಸಖಾಫಿ ಹಸನ್ ನಗರ , ಕನ್ವೀನರ್ ಹನೀಫ್ ಬನ್ನೂರು ರವರನ್ನು ಆಯ್ಕೆ ಮಾಡಲಾಯಿತು.
ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಅಧ್ಯಕ್ಷ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆಯಲ್ಲಿ ಸೆ.೨೩ರಂದು ಬನ್ನೂರು ಸುನ್ನಿ ಸೆಂಟರ್ ನಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ವೈಸ್ ಚೆಯರ್ ಮ್ಯಾನ್ಗಳಾಗಿ ಸಲಾಂ ಹನೀಫಿ ಕಬಕ, ಉವೈಸ್ ಬೀಟಿಗೆ, ವೈಸ್ ಕನ್ವಿನರ್ ಗಳಾಗಿ ಹಮೀದ್ ಕೊಡಿಪ್ಪಾಡಿ, ಬಾತಿಷ್ ಬನ್ನೂರು, ಫೈನಾನ್ಶಿಯಲ್ ಸೆಕ್ರೆಟರಿ ಮುನೀರ್ ಬೀಟಿಗೆ, ಅಶ್ರಫ್ ಕಬಕ, ರಾಶಿದ್ ಮುಕ್ವೆ ಮತ್ತು ಸಮಿತಿ ಸದಸ್ಯರುಗಳಾಗಿ ಖಾದರ್ ಸಖಾಫಿ ಹಸನ್ ನಗರ,ಸೈಫುಲ್ಲಾ ಸಅದಿ ಬನ್ನೂರು, ಶಿಯಾಬ್ ಹಸನ್ ನಗರ, ಇಬ್ರಾಹಿಂ ಖಲೀಲ್ ಬನ್ನೂರು, ಶಫೀಮ್ ಹಸನ್ ನಗರ, ರಫೀಕ್ ಕೆಮ್ಮಾಯಿ ಆಯ್ಕೆ ಮಾಡಲಾಯಿತು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಬಕ ಸ್ವಾಗತಿಸಿ, ವಂದಿಸಿದರು.