ಪುತ್ತೂರು : ಗಾಂಧಿ ಜಯಂತಿ ಅಂಗವಾಗಿ ಪುತ್ತೂರು ಗಾಂಧಿ ಕಟ್ಟೆಯಲ್ಲಿ ಗಾಂಧೀಜಿ ಪ್ರತಿಮೆಗೆ ಕಾವು ಹೇಮನಾಥ್ ಶೆಟ್ಟಿಯವರು ಹಾರಾರ್ಪಣೆ ಮಾಡಿ ಗಾಂಧಿ ಪ್ರತಿಮೆಯ ಪಾದಕ್ಕೆ ನಮಿಸುವ ಮೂಲಕ ಸರಳವಾಗಿ ಆಚರಿಸಿಕೊಂಡರು.
![](http://dtvkannada.in/wp-content/uploads/2021/10/IMG-20211002-WA0044-1024x768.jpg)
![](http://dtvkannada.in/wp-content/uploads/2021/10/IMG-20211002-WA0046-1024x768.jpg)
ಈ ಸಂದರ್ಭದಲ್ಲಿ ಗಾಂಧಿ ಕಟ್ಟೆ ಸಮತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ನಗರ ಸಭೆ ಮಾಜಿ ಸದಸ್ಯ ಕೇಶವ ಪೂಜಾರಿ ಬೆದ್ರಳ, ಯುವ ಕಾಂಗ್ರೆಸ್ ಮುಖಂಡರು ಹನೀಫ್ ಪುಣ್ಚತ್ತಾರ್, ಇಬ್ರಾಹಿಂ ನೆಕ್ಕರೆ, ಆದಂ ಕಲ್ಲರ್ಪೆ ಉಪಸ್ಥಿತರಿದ್ದರು.