ಸುಳ್ಯ: ಮುಸ್ಲಿಂ ಸಮುದಾಯದ ವಿರುದ್ದವಾಗಿ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಪ್ರಚೋದನಾಕಾರಿ ಹೇಳಿಕೆ ಹಾಗೂ ಪ್ರವಾದಿ (ಸ-ಅ)ನಿಂದನೆಯನ್ನು ವಿರೋಧಿಸಿ ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆದೇಶ ಮೇರೆಗೆ ನಾಳೆ ಸೋಮವಾರ ಸಂಜೆ 4ಗಂಟೆಗೆ ಸುಳ್ಯದ ಹಳೆ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆ ನಡೆಯಲಿದೆ.
ಪ್ರಚೋದನೆಯನ್ನು ಪ್ರಬುದ್ಧತೆ ಯಿಂದ ಎದುರಿಸೋಣ ಎಂಬ ಶೀರ್ಷಿಕೆಯಲ್ಲಿ ಜಿಲ್ಲೆಯ ಹನ್ನೆರಡು ವಲಯದಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಯಲಿದೆಯೆಂದು SKSSF ಸುಳ್ಯ ವಲಯ ಸಮಿತಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ