ಎಮ್ ಎಸ್ ಸ್ಪೋರ್ಟ್ಸ್ ವೇರ್, ಹಾಗೂ ಬಾವ ಅರ್ಥ್ ಮೂವರ್ಸ್ ಪ್ರಾಯೋಜಕತ್ವ ಹೊಂದಿರುವ ಕೋಸ್ಟಲ್ ಕೌಂಟಿ ಕ್ಲಬ್ ಕ್ರಿಕೇಟ್ ತಂಡದ ನೂತನ ಸಮವಸ್ತ್ರ (ಜರ್ಸಿ) ಇತ್ತಿಚೆಗೆ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ನಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಔಫಾಝ್ ಕೃಷ್ಣಾಪುರ ಯುವಕರಲ್ಲಿ ಕ್ರೀಡೆ ಕೇವಲ ಮನೋರಂಜನೆ ಮಾತ್ರವಲ್ಲ ಸಹೋದರತ್ವ ಸಾಮರಸ್ಯ ತುಂಬುವಂತಹಾ ವಾತಾವರಣ ನಿರ್ಮಾಣವಾಗುವುದರ ಜತೆಗೆ ರಕ್ತದಾನದಂತಹಾ ಸಾಮಾಜಿಕ ಜನಜಾಗೃತಿ ಇಂದು ಅತ್ಯಗತ್ಯವಾಗಿದೆ ಎಂದರು. ರಕ್ತದಾನದ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಂಡದ ಸಮವಸ್ತ್ರದಲ್ಲಿ (ಜೆರ್ಸಿ) ಬ್ಲಡ್ ಡೋನರ್ಸ್ ಮಂಗಳೂರು ಇದರ ಲೋಗೊ ಅವಳವಡಿಸಿ ಜಾಗೃತಿ ಮೂಡಿಸಲಾಯಿತು.
![](http://dtvkannada.in/wp-content/uploads/2021/11/IMG-20211108-WA0022-1024x768.jpg)
ಸಮವಸ್ತ್ರ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಔಫಾಝ್ ಕೃಷ್ಣಾಪುರ, ಇಮ್ರಾನ್ ಕೆಎಫ್ಸಿ, ನೌಷಾರ್, ಎಮ್ ಎಸ್ ಶರೀಫ್, ಶಾರ್ವಾನ, ಅಸೀಲ್, ನೌಫಲ್ ಹಾಗೂ ಅಝೀಮ್ ಬೆಂಗಳೂರು ಉಪಸ್ಥಿತರಿದ್ದರು.