dtvkannada

ಕುಣಿಗಲ್: ಕೌಟುಂಬಿಕ ಕಲಹದಿಂದ ಹೆಂಡತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಷಯ ಕೇಳಿ ಗಂಡನೂ ವಿಷ ಕುಡಿದು ಜೊತೆಗೆ ನೇಣು ಹಾಕಿಕೊಂಡು ಇಬ್ಬರು ಅತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ.

ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಕೆಂಪಸಾಗರ ಗ್ರಾಮದ ವಾಸಿ ಮುನಿರಾಜು(26) ಹಾಗೂ ಈಕೆಯ ಪತ್ನಿ ವರಲಕ್ಷ್ಮಿ(22) ನೇಣಿಗೆ ಶರಣಾಗಿರುವ ನವ ದಂಪತಿಗಳು. ಮುನಿರಾಜು ಅವರು ತಮ್ಮ ಹತ್ತಿರದ ಸಂಬಂಧಿ ಕೆಂಪಸಾಗರ ಗ್ರಾಮದ ವರಲಕ್ಷ್ಮಿಯನ್ನು ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ವರಲಕ್ಷ್ಮಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೇಟೆಗೆ ಹೋಗಿದ್ದ ಅತ್ತೆ ಮಾವ ಮಧ್ಯಾಹ್ನ ಮನೆಗೆ ಬಂದಾಗ ವರಲಕ್ಷ್ಮಿ ನೇಣು ಹಾಕಿಕೊಂಡಿರುವ ವಿಷಯ ತಿಳಿದಿದೆ. ಈ ವಿಷಯವನ್ನು ಗ್ರಾಮಸ್ಥರು ಮುನಿರಾಜುಗೆ ತಿಳಿಸಿದ್ದಾರೆ. ಇದರಿಂದ ಶಾಕ್ ಆದ ಮುನಿರಾಜು ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.ಗ್ರಾಮಸ್ಥರು ಇಬ್ಬರ ಶವಗಳನ್ನು ಕುಣಿಗಲ್ ಶವಾಗಾರಕ್ಕೆ ಸಾಗಿಸಿದ್ದಾರೆ. ಕುಣಿಗಲ್ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!