ಬೆಂಗಳೂರು: ಬಿಟಿಎಂ ಲೇಔಟ್ ನಲ್ಲಿ ಫ್ರೆಶ್ ಅಂಡ್ ಬೇಕ್ ಬೇಕರಿ ವ್ಯಾಪಾರ ನಡೆಸುತ್ತಿರುವ ಇಬ್ರಾಹಿಂ ತೆಕ್ಕಿಲ್ ಗೂನಡ್ಕ ಹಾಗು ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಅಯ್ಯುಬ್ ಗೂನಡ್ಕ ರವರಿಗೆ ಬೆಳೆಬಾಳುವ ದಾಖಲೆಗಳಿದ್ದ ಪರ್ಸ್ ಬಿದ್ದು ಸಿಕ್ಕಿದ್ದು, ಕೂಡಲೇ ವಾರಿಸುದಾರರಿಗೆ ಅದನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಪ್ರಸನ್ನ ಕುಮಾರ್ ಅಮರ ಕೆನೊಫಿ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿರುವ ತಮಿಳುನಾಡು ಮೂಲದ ವ್ಯಕ್ತಿಯ 10,000 ನಗದು ಮತ್ತು ಅನೇಕ ಬ್ಯಾಂಕ್ ಎಟಿಎಂ ಹಾಗು ಬೆಲೆಬಾಳುವ ದಾಖಲೆಗಳನ್ನು ಒಳಗೊಂಡ ಪರ್ಸ್ ಕಳೆದುಕೊಂಡಿದ್ದರು.ಈ ಪರ್ಸ್ ಯುವಕರಿಗೆ ಬಿದ್ದು ಸಿಕ್ಕಿದ್ದು, ಅದರಲ್ಲಿರುವ ವಿಳಾಸವನ್ನು ಕಂಡು ಹಿಡಿದು ತಕ್ಷಣ ಅವರನ್ನು ಸಂಪರ್ಕಿಸಿ ವಾರೀಸುದಾರರನ್ನು ಖಚಿತಪಡಿಸಿ ಪರ್ಸ್ ಅನ್ನು ಹಿಂತಿರುಗಿಸಿ ಮಾನವೀಯತೆ ಮರೆದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ.